ಮಲೇಬೆನ್ನೂರಿನಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ

ಮಲೇಬೆನ್ನೂರಿನಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ

ಮಲೇಬೆನ್ನೂರು, ಫೆ. 18-ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು  ಬಲಪಡಿಸುವ ದೃಷ್ಟಿಯಿಂದ ಪ್ರತಿ ಗ್ರಾಮದಲ್ಲೂ ವಿಕಸಿತ ಭಾರತ ಗ್ರಾಮ ಚಲೋ ವಿಶೇಷ ಅಭಿಯಾನವನ್ನು  ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಸಾಧನೆಗಳ ಕರ ಪತ್ರವನ್ನು ಶನಿವಾರ ಮಲೇಬೆನ್ನೂರಿನಲ್ಲಿ ಶಾಸಕ ಬಿ.ಪಿ. ಹರೀಶ್ ಅವರು ಮನೆ ಮನೆಗೆ ಹಂಚುವುದರ ಮೂಲಕ  ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಮಾಜಿ ಸದಸ್ಯ ಆದಾಪುರ ವೀರಭದ್ರಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಹರಿಹರ ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣಪ್ಪ, ತಾ.ಗ್ರಾ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಆದಾಪುರ ವೀರೇಶ್, ಅಭಿಯಾನದ ಸಂಚಾಲಕರಾದ ಮಹೇಂದ್ರ ಹೆಬ್ಬಾಳ್, ಪುರಸಭೆ ಸದಸ್ಯರಾದ ಗೌಡ್ರ ಮಂಜುನಾಥ್, ಬೆಣ್ಣೆಹಳ್ಳಿ ಸಿದ್ದೇಶ್, ಬಿ. ಮಂಜುನಾಥ್, ಪಿ.ಆರ್. ರಾಜು, ಓ.ಜಿ. ಕುಮಾರ್, ಜಿಗಳೇರ ಹಾಲೇಶಪ್ಪ, ಎ.ಕೆ. ಲೋಕೇಶ್, ಭೋವಿ ಮಂಜಣ್ಣ, ಬಟ್ಟೆ ಅಂಗಡಿ ವಿಶ್ವ, ಕಜ್ಜರಿ ಹರೀಶ್, ಆನಂದಾಚಾರ್, ಹಾಲಿವಾಣದ ಮೋಹನ್, ಕೊಮಾರನಹಳ್ಳಿ ಸುನೀಲ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!