ಸದೃಢ ಆರೋಗ್ಯಕ್ಕೆ ಕ್ರೀಡೆ ಸಹಕಾರಿ : ದಿನೇಶ್ ಶೆಟ್ಟಿ

ಸದೃಢ ಆರೋಗ್ಯಕ್ಕೆ ಕ್ರೀಡೆ ಸಹಕಾರಿ : ದಿನೇಶ್ ಶೆಟ್ಟಿ

ದಾವಣಗೆರೆ, ಫೆ. 12 – ಮಕ್ಕಳು ತಮ್ಮ ಓದಿನ ಜೊತೆಗೆ ಹೆಚ್ಚು ಹೆಚ್ಚಾಗಿ ಕ್ರೀಡಾ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದರಿಂದ ಆರೋಗ್ಯವಂತ ರಾಗಿರಬಹುದು ಎಂದು ಕ್ರೀಡಾ ಪಟುಗಳ ಸಂಘದ ಅಧ್ಯಕ್ಷ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ತಿಳಿಸಿದರು.

ನಗರದ ಪಿ.ಜೆ. ಬಡಾವಣೆಯಲ್ಲಿರುವ ಸಂತ ಪೌಲರ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಓದಿನ ಜೊತೆಗೆ  ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ  ವಿಜೇತರಾಗಿ ಸಾಧನೆ ಮಾಡಿ ನಿಮ್ಮ  ಶಾಲೆಗೆ,  ಪೋಷಕರಿಗೆ ಕೀರ್ತಿ ತನ್ನಿರಿ ಎಂದು ಶುಭ ಹಾರೈಸಿದರು.

ಸಂತ ಪೌಲರ ವಿದ್ಯಾಸಂಸ್ಥೆಯ ಮುಖ್ಯಸ್ಥ ಸಿಸ್ಟರ್ ಮಾರ್ಜರಿ, ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಸಿಸ್ಟರ್ ಸಮಂತ, ಕನ್ನಡ ಮಾಧ್ಯಮ ವಿಭಾಗದ ಸಿಸ್ಟರ್ ಸುಪ್ರಿಯಾ, ಹೈಸ್ಕೂಲ್ ಮುಖ್ಯೋಪಾಧ್ಯಾಯ ಸಿಸ್ಟರ್ ವೆನಿಸಾ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯ ವೈಲೆಟ್, ದೈಹಿಕ ಶಿಕ್ಷಕರಾದ ರೀಟಾ , ಟಿ.ಎಂ. ರವೀಂದ್ರ ಸ್ವಾಮಿ, ಗೋವಿಂದಪ್ಪ, ಪ್ರವೀಣ್, ಶಿಕ್ಷಕರಾದ ಕಿರಣ್, ಎಂ.ಕೆ. ಮಂಜುಳ, ರಾಧಾ, ಅಮಲ, ಭಾಗ್ಯನಾಥನ್, ಎಲೀಜ, ಸೂಸಿ ಮೇರಿ, ಫಿಲೋಮಿನ, ನಯನ, ರಾಗಿಣಿ ಸೇರಿ ದಂತೆ ವಿವಿಧ ವಿಭಾಗಗಳ ಶಿಕ್ಷಕರು ಭಾಗವಹಿಸಿದ್ದರು.

error: Content is protected !!