ಸಂವಿಧಾನ ಜಾಗೃತಿ ಜಾಥಾ ಹಿನ್ನೆಲೆ ಮೆರವಣಿಗೆ, ಸಂವಿಧಾನ ಪ್ರಸ್ತಾವನೆ ಪಠಣ

ಸಂವಿಧಾನ ಜಾಗೃತಿ ಜಾಥಾ ಹಿನ್ನೆಲೆ ಮೆರವಣಿಗೆ, ಸಂವಿಧಾನ ಪ್ರಸ್ತಾವನೆ ಪಠಣ

ಜಗಳೂರು, ಫೆ. 13 – ತಾಲ್ಲೂಕು ಆಡಳಿತ, ವಿವಿಧ ಇಲಾಖೆಗಳ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು, ಸಂಘಟನೆ ಮುಖಂಡರುಗಳು,  ಇದೇ ದಿನಾಂಕ 20 ರಂದು  ‘ಸಂವಿಧಾನ ಜಾಗೃತಿ ಜಾಥಾದ ರಥೋತ್ಸವ’ ಆಗಮಿಸುವ ಹಿನ್ನೆಲೆಯಲ್ಲಿ ಇಂದು ಪೂರ್ವಭಾವಿಯಾಗಿ ಅರಿವು ಮೂಡಿಸಲಾಯಿತು.

ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿ ಪ್ರತಿಯೊಬ್ಬರೂ ಕೈಯಲ್ಲಿ ನೂರಾರು ಮೇಣದ ಬತ್ತಿ ಬೆಳಗಿಸುವ ಮೂಲಕ ಭಾರತ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಸಂವಿಧಾನ ಜಾರಿಗೊಂಡು 75 ವರ್ಷಗಳ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ದಲ್ಲಿ ಸಂವಿಧಾನದ ಆಶಯ ಮತ್ತು ಮೌಲ್ಯ ಗಳನ್ನು ಸಾರಲು ರಾಜ್ಯ ಸರ್ಕಾರ ರಾಜ್ಯವ್ಯಾಪಿ  ಜಾಗೃತಿ ಜಾಥಾ ರಥೋತ್ಸವ ನಡೆಸಲಾಗುತ್ತಿದ್ದು. ತಾಲ್ಲೂಕಿನಲ್ಲಿ ಇದೇ ದಿನಾಂಕ 20 ರಿಂದ 23 ರವರೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆ‌ ನಿವೃತ್ತ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ಮಾತನಾಡಿ, ದೇಶದಲ್ಲಿ ಮೇಲು–ಕೀಳು, ಜಾತಿ, ಪದ್ಧತಿ ಹೋಗಲಾಡಿಸಲು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ದೇಶದ ಪ್ರತಿಯೊಬ್ಬರಿಗೂ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಸಹಾಯಕ‌ ನಿರ್ದೇಶಕ ಬೀರೇಂದ್ರಕುಮಾರ್ , ಗ್ರೇಡ್ – 2 ತಹಶೀಲ್ದಾರ್ ಮಂಜ್ಯಾನಾಯ್ಕ, ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ದೈಹಿಕ ಶಿಕ್ಷಣ ಅಧಿಕಾರಿ ಸುರೇಶ್ ರೆಡ್ಡಿ, ವಸತಿನಿಲಯ ಮೇಲ್ವಿ ಚಾರಕರಾದ ಮಹಾಬಲೇಶ್, ಸೋಮಣ್ಣ, ದೇವೇಂದ್ರಪ್ಪ, ಮಂಗಳಾ, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಶಂಭುಲಿಂಗಪ್ಪ, ಎ.ಡಿ. ನಾಗಲಿಂಗಪ್ಪ, ಆರ್.ಓಬಳೇಶ್, ಪೂಜಾರ್ ಸಿದ್ದಪ್ಪ, ವಕೀಲ ಹನುಮಂತಪ್ಪ, ಕುಬೇಂದ್ರಪ್ಪ, ಎಂ. ರಾಜಪ್ಪ, ಬಸವರಾಜ್, ಮಾದಿಹಳ್ಳಿ ಮಂಜುನಾಥ್, ಸತೀಶ್, ಸೇರಿದಂತೆ ನೂರಾರು ಜನ  ಭಾಗವಹಿಸಿದ್ದರು.

error: Content is protected !!