ಕ್ರಿಕೆಟ್ ಟೂರ್ನಿ : ಎ.ಕೆ.ಆರ್ ತಂಡಕ್ಕೆ ಬಹುಮಾನ

ಕ್ರಿಕೆಟ್ ಟೂರ್ನಿ : ಎ.ಕೆ.ಆರ್ ತಂಡಕ್ಕೆ ಬಹುಮಾನ

ಮಲೇಬೆನ್ನೂರು, ಫೆ.4- ಪಟ್ಟಣದ ಎ.ಕೆ. ಸ್ಪೋರ್ಟ್ಸ್ ವತಿಯಿಂದ ನೀರಾವರಿ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿದ್ದ 3 ದಿನಗಳ ಮಲೇಬೆನ್ನೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಪಡೆದ ಎ.ಕೆ.ಆರ್. ತಂಡಕ್ಕೆ  ಶಾಸಕ ಬಿ.ಪಿ. ಹರೀಶ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಮತ್ತು ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅವರು ಬಹುಮಾನ ವಿತರಣೆ ಮಾಡಿದರು. 

ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ಪುರಸಭೆ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಬಿ. ಮಂಜುನಾಥ್, ಪಿ.ಆರ್. ರಾಜು,  ಕೆ.ಪಿ. ಗಂಗಾಧರ್, ಪಾನಿಪೂರಿ ರಂಗನಾಥ್, ಎ.ಕೆ. ಲೋಕೇಶ್, ಭೋವಿ ಮಂಜಣ್ಣ, ಬಿ.ಎನ್. ಚಂದ್ರಪ್ಪ, ವೈ. ಚಂದ್ರಶೇಖರ್, ಎ.ಕೆ. ಆಂಜನೇಯ, ಕಿರಣ್, ಮೈತ್ರಿ ಜಿಗಳಿಯ ಕೆ.ಜಿ. ಬಸವರಾಜ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!