ಶಿಕ್ಷಣ ಪಡೆದವನೇ ಶ್ರೀಮಂತ : ಬಾಡದ ಆನಂದರಾಜ್

ಶಿಕ್ಷಣ ಪಡೆದವನೇ ಶ್ರೀಮಂತ : ಬಾಡದ ಆನಂದರಾಜ್

ದಾವಣಗೆರೆ, ಫೆ.4- ಆಧುನಿಕ ಜಗತ್ತಿನಲ್ಲಿ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡು ಶಿಕ್ಷಣ ಪಡೆದವನೇ ಶ್ರೀಮಂತ ಹಾಗಾಗಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತರಾಗಬೇಕು ಎಂದು ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್ ಕರೆ ನೀಡಿದರು.

ನಗರದ ಎಸ್.ಎಂ. ಕೃಷ್ಣ ಬಡಾವಣೆಯ ವಿದ್ಯಾಜ್ಯೋತಿ ಕಾನ್ವೆಂಟ್‌ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತ ನಾಡುತ್ತಾ, ಶಿಕ್ಷಣ ಎಂಬ ಹುಲಿಯ ಹಾಲನ್ನು ಕುಡಿ ದವರು ಸಮಾಜದಲ್ಲಿ ಘರ್ಜಿಸಲೇಬೇಕು. ಮುಂದೊಂದು ದಿನ ಶಿಕ್ಷಣವಿಲ್ಲದವರನ್ನು ನಿರ್ಜೀವ ವಸ್ತುಗಳಂತೆ ನೋಡುವ ಕಾಲ ದೂರವಿಲ್ಲ. ನಮ್ಮ ಬಡತನಕ್ಕೆ ಮೂಲ ಔಷಧ ಶಿಕ್ಷಣ ಎಂಬುದು ಮರೆಯುವಂತಿಲ್ಲ ಎಂದು ಕರೆ ನೀಡಿದರು.

ಯಶಸ್ವಿ ಉದ್ಯಮಿಯಾಗಿ ದಾವಣಗೆರೆ ಜಿಲ್ಲೆಯಲ್ಲೇ ಅತೀ ಹೆಚ್ಚು ತೆರಿಗೆ ಕಟ್ಟುವ ಎಂ.ಆನಂದ್‌ರವರು, ಸಮಾಜಮುಖಿ ಕಾರ್ಯವಾದ ಶಿಕ್ಷಣ ಸಂಸ್ಥೆಯನ್ನು ಶೋಷಿತ ಬಡಾವಣೆಯಲ್ಲಿ ಸ್ಥಾಪಿಸಿ ಉತ್ತಮ ಗುಣಮಟ್ಟ ಶಿಕ್ಷಣ ನೀಡುತ್ತಿರುವುದು ಶ್ಲ್ಯಾಘನೀಯ ಎಂದು ಬಾಡದ ಆನಂದರಾಜ್ ಸಂತೋಷ್‌ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ವಾಮದೇವಪ್ಪ, ಪಾಲಿಕೆ ಸದಸ್ಯೆ ಶ್ರೀಮತಿ ಮಂಜುನಾಥ್, ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಶ್ರೀಮತಿ ರೂಪ ಆನಂದ್, ಉದ್ಯಮಿಗಳಾದ ಆನಂದ್, ಅನಿಸ್‌ ಪಾಷಾ, ಗುಡ್ಡೇಶ್, ಪತ್ರಕರ್ತ ಮಂಜುನಾಥ ಗೌರಕ್ಕಳ ವರ್, ಸಿದ್ದಲಿಂಗಪ್ಪ, ವಿಜಯಕುಮಾರ್ ಇದ್ದರು.

error: Content is protected !!