ದಾವಣಗೆರೆ, ಫೆ.4- ನಗರದ ಶ್ರೀ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್ನಲ್ಲಿರುವ ಆದರ್ಶ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನಮ್ಮ ದೇಹದ ವಿಜ್ಞಾನ’ ಕಾರ್ಯಾಗಾರಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗದ ಅಂಗರಚನಾ ಶಾಸ್ತ್ರದ ಉಪನ್ಯಾಸಕ ಪ್ರೊ.ಸುಮನ್ ಎನ್.ಎಸ್. ಚಾಲನೆ ನೀಡಿದರು. ಪ್ರಾರಂಭದಲ್ಲಿ ಪ್ರತಿಷ್ಠಾನದ ಯೋಗ ಗುರು ಡಾ. ರಾಘವೇಂದ್ರ ಗುರೂಜಿ, ಅಗ್ನಿಹೋತ್ರ ಹೋಮವನ್ನು ಮಾಡಿ ಶಾಂತಿ ಮಂತ್ರವನ್ನು ಹೇಳಿಕೊಟ್ಟರು. ಯೋಗ ಶಿಕ್ಷಕ ವೀರಭದ್ರಯ್ಯ ಸ್ವಾಮಿ, ಪ್ರಭುಸ್ವಾಮಿ ಹಿರೇಮಠ್, ನಾಗರಾಜ್, ಮೀಸಲು ಆರಕ್ಷಕ ಚಂದ್ರ, ಯೋಗ ಸಾಧಕ ಮಹಾಂತೇಶ್, ಶ್ರೀಮತಿ ಅಶ್ವಿನಿ ಒಡೋನಿ, ಅಂಚೆ ಇಲಾಖೆಯ ಶ್ರೀಮತಿ ವೇದಾವತಿ ಡಿ.ಎಂ.ಎಸ್. ಮುಂತಾದವರು ಭಾಗವಹಿಸಿದ್ದರು.
ನಗರದಲ್ಲಿ ‘ನಮ್ಮ ದೇಹದ ವಿಜ್ಞಾನ’ ಕಾರ್ಯಾಗಾರಕ್ಕೆ ಚಾಲನೆ
![13 vignayana 05.02.2024 ನಗರದಲ್ಲಿ ‘ನಮ್ಮ ದೇಹದ ವಿಜ್ಞಾನ’ ಕಾರ್ಯಾಗಾರಕ್ಕೆ ಚಾಲನೆ](https://janathavani.com/wp-content/uploads/2024/02/13-vignayana-05.02.2024-860x573.jpg)