ದಾವಣಗೆರೆ, ಜ. 28- ಡಿಸಿಎಂ ಟೌನ್ ಶಿಪ್ನಲ್ಲಿರುವ ಲಿಟ್ಲ್ ಚಾಂಪ್ಸ್ ಶಾಲೆಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ವಿಜಯ ಲಾರಿ ಟ್ರಾನ್ಸ್ಪೋರ್ಟ್ನ ಮಾಲೀಕ ಕಿರಣ್ ಕುಮಾರ್ ಮತ್ತು ಸಂಸ್ಥೆಯ ನಿರ್ದೇಶಕರಾದ ಸಹನ ವಿಜಯಕುಮಾರ್ ನೆರವೇರಿಸಿದರು.
ಕಿರಣ್ಕುಮಾರ್ ಮಾತನಾಡಿ, ಮಕ್ಕಳು ದೇಶದ ಬಗ್ಗೆ ಅಭಿಮಾನ, ಗೌರವ ಹೊಂದಬೇಕು ಹಾಗೂ ಮುಂದೆ ನಮ್ಮ ದೇಶದ ಸತ್ಪ್ರಜೆಗಳಾಗಿ ಮೂಲಭೂತ ಹಕ್ಕುಗಳಿಂದ ಯಾರೊಬ್ಬರೂ ವಂಚಿತರಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕಿಯರಾದ ನಾಗವೇಣಿ, ವಿಜಯಲಕ್ಷ್ಮಿ, ಕಾವ್ಯ, ಶೋಭಾ ಹುಲ್ಲುಮನಿ, ಆಶಾ, ಗಂಗಾ, ಲಾವಣ್ಯ, ಭಾಗ್ಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.