ಡಿಸಿಸಿ ಬ್ಯಾಂಕಿಗೆ ಹನಗವಾಡಿ ಕುಮಾರ್ ಆಯ್ಕೆ: ಹರಿಹರ ತಾ.ನಲ್ಲಿ ಸಂಭ್ರಮ

ಡಿಸಿಸಿ ಬ್ಯಾಂಕಿಗೆ ಹನಗವಾಡಿ ಕುಮಾರ್ ಆಯ್ಕೆ: ಹರಿಹರ ತಾ.ನಲ್ಲಿ ಸಂಭ್ರಮ

ಮಲೇಬೆನ್ನೂರು, ಜ.28- ಗುರುವಾರ ದಾವಣಗೆರೆ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಹರಿಹರ ತಾಲ್ಲೂಕಿನ `ಎ’ ವರ್ಗದಿಂದ ಸ್ಪರ್ಧಿಸಿದ್ದ ಹನಗವಾಡಿಯ ಡಿ.ಕುಮಾರ್ ಅವರು 16 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪುನರಾಯ್ಕೆ ಬಯಸಿದ್ದ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಹೊಳೆಸಿರಿಗೆರೆಯ ಬಿ.ಹಾಲೇಶಪ್ಪ ಅವರು 13 ಮತಗಳನ್ನು ಪಡೆದು ಪರಾಭವಗೊಂಡರು. ಒಟ್ಟು 29 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತದಾನಕ್ಕೆ ಅರ್ಹತೆ ಪಡೆದ್ದವು.

ಸಂಭ್ರಮಾಚರಣೆ : ಚುನಾವಣೆಯಲ್ಲಿ ಡಿ.ಕುಮಾರ್ ಅವರು ವಿಜಯಶಾಲಿಯಾಗಿ ಹೊರ ಬಂದ ತಕ್ಷಣ ಕಾಂಗ್ರೆಸ್ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಸಮ್ಮುಖದಲ್ಲಿ ವಿಜಯೋತ್ಸವ ಆಚರಿಸಿದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ.ಅಬೀದ್ ಅಲಿ, ಎಲ್.ಬಿ.ಹನುಮಂತಪ್ಪ, ಮುಖಂಡರಾದ ಎಸ್.ಜಿ.ಪರಮೇಶ್ವರಪ್ಪ, ಜಿ.ಮಂಜುನಾಥ್ ಪಟೇಲ್, ಜಿಗಳಿ ಆನಂದಪ್ಪ, ಸಿರಿಗೆರೆ ರಾಜಣ್ಣ, ಬಿ.ವೀರಯ್ಯ, ವೈ.ದ್ಯಾವಪ್ಪರೆಡ್ಡಿ, ಹರಿಹರ ನಗರಸಭೆ ಸದಸ್ಯ ಸಿದ್ದೇಶ್, ಮಲೇಬೆನ್ನೂರಿನ ತಳಸದ ಬಸವರಾಜ್, ಕೆ.ಪಿ.ಗಂಗಾಧರ್, ಪಿ.ಆರ್.ಕುಮಾರ್, ಪಿ.ಹೆಚ್.ಶಿವಕುಮಾರ್, ಕುಂಬಳೂರು ವಾಸು, ಸಿ.ಅಬ್ದುಲ್ ಹಾದಿ, ಯುನೂಸ್, ಕೊಕ್ಕನೂರು ಸೋಮಶೇಖರ್, ಹನಗವಾಡಿಯ ಬಣಕಾರ್ ಪ್ರಸನ್ನ, ಸಾರಥಿ ಮಂಜುನಾಥ್, ವಕೀಲ ಡಿ.ಮಂಜುನಾಥ್, ರುದ್ರಮುನಿ, ಕ್ಯಾತನಹಳ್ಳಿ ಪಾಲಾಕ್ಷಪ್ಪ, ಛೇರ್ಮನ್ ವಿಜಯಕುಮಾರ್, ಪಿ.ಮಂಜುನಾಥ್, ಆರ್.ಟಿ.ವಿಜಯಕುಮಾರ್, ಅಪ್ಪಿ, ಬಿ.ಎಂ.ಸಿದ್ದೇಶ್, ಬೆಳ್ಳೂಡಿಯ ಸಿದ್ದಾರ್ಥ ಶಿವಕುಮಾರ್, ಹರಗನಹಳ್ಳಿ ರಾಜು ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.

error: Content is protected !!