ದಾವಣಗೆರೆ, ಜ. 25- ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಸಿದ್ದವೀರಪ್ಪ ಬಡಾವಣೆ, ಎಂಸಿಸಿ ಬಿ ಬ್ಲಾಕ್, ಆಂಜನೇಯ ಬಡಾವಣೆ ನಾಗರಿಕರು 1990ರ ದಶಕದಲ್ಲಿ ಕರಸೇವಕರು, ಹಿರಿಯರೂ ಆದ ಕೆ.ಬಿ. ಶಂಕರ್ ನಾರಾಯಣ ಹಾಗೂ ಬುಕ್ ಸ್ಟಾಲ್ ಸೋಮಣ್ಣ ಅವರನ್ನು ಪೂಜಾ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಸನ್ಮಾನಿಸುವುದರೊಂದಿಗೆ ವಿಶೇಷವಾಗಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಡಾ. ಶಿವಕುಮಾರ್ ಸ್ವಾಮಿ ಭಕ್ತ ಮಂಡಳಿ ಸರ್ವ ಸದಸ್ಯರು, ಆಂಜನೇಯ ಬಡಾವಣೆ, ಎಂಸಿಸಿ ಬಿ ಬ್ಲಾಕ್, ಸಿದ್ದವೀರಪ್ಪ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.
ನಗರದಲ್ಲಿ ಕರಸೇವಕರಿಗೆ ಆತ್ಮೀಯ ಸನ್ಮಾನ
![41 kara sevaka news 29.01.2024 ನಗರದಲ್ಲಿ ಕರಸೇವಕರಿಗೆ ಆತ್ಮೀಯ ಸನ್ಮಾನ](https://janathavani.com/wp-content/uploads/2024/01/41-kara-sevaka-news-29.01.2024--860x645.jpg)