ದಾವಣಗೆರೆ, ಜ. 23- ಡಿಸಿಎಂ ಟೌನ್ಶಿಪ್ನಲ್ಲಿರುವ ಲಿಟ್ಲ್ ಚಾಂಪ್ಸ್ ಶಾಲೆಯಲ್ಲಿ ಶ್ರೀ ರಾಮ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ರಾಮನಿಗೆ ವಿವಿಧ ರೀತಿಯ ಫಲ-ಪುಷ್ಪಗಳೊಂದಿಗೆ ಅಲಂಕಾರ ಮಾಡಿ, ಪೂಜಿಸಿ, ಶ್ರೀ ಸ್ವಾಮಿಗೆ ಪ್ರಸಾದ ನೈವೇದ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ, ಅಧ್ಯಕ್ಷ ಕಿರಣ್ಕುಮಾರ್, ನಿರ್ದೇಶಕರುಗಳಾದ ಶ್ರೀಮತಿ ಸಹನಾ, ಶ್ರೀಮತಿ ಸ್ನೇಹಾ ಹಾಗೂ ಶಾಲೆಯ ಶಿಕ್ಷಕರಾದ ನಾಗವೇಣಿ, ವಿಜಯಲಕ್ಷ್ಮಿ, ಕಾವ್ಯ, ಶೋಭಾ ಹುಲ್ಲುಮನಿ, ಆಶಾ, ಗಂಗಾ, ಲಾವಣ್ಯ, ಭಾಗ್ಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.