ಬ್ರಹ್ಮ ಚೈತನ್ಯ ಮಂದಿರದಲ್ಲಿ ರಾಮ ತಾರಕ ಹೋಮ

ಬ್ರಹ್ಮ ಚೈತನ್ಯ ಮಂದಿರದಲ್ಲಿ ರಾಮ ತಾರಕ ಹೋಮ

ದಾವಣಗೆರೆ, ಜ. 22 – ನಗರದ ಬ್ರಹ್ಮ ಚೈತನ್ಯ ಮಂದಿರದಲ್ಲಿ ರಾಮ ತಾರಕ ಹೋಮ  ಇಂದು ಮುಂಜಾನೆ ಶ್ರೀ ರಾಮ ನಾಮ ಜಪ ಮುಂತಾದ ಕಾರ್ಯಕ್ರಮಗಳು ನಡೆದವು. ರಾಮ ತಾರಕ ಹೋಮದಲ್ಲಿ ಅಧ್ಯಕ್ಷ ಪಿ.ಸಿ. ಮಹಾಬಲೇಶ್ವರ ಭಟ್ ದಂಪತಿಗಳು, ಅನಿಲ್ ಬಾರಂಗಾಳ್‌, ಕೊಲ್ಲೂರು ಜಯಪ್ರಕಾಶ್, ಅಚ್ಯುತ್‌ಮೂರ್ತಿ ಪಿ.ಎಲ್, ಶಂಕರ್ ರಾವ್, ಬಿ.ಟಿ ಚಂದ್ರಶೇಖರ್, ದಿವಾಕರ್ ಕಾಂತಾವರ,  ವಿಜಯ್ ಕೊಲ್ಲೂರು, ಮಹೇಶ್ ಪಿ.ವಿ., ರಾಜು ಸಲ್ಲುಗುಳಿ ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು. ಸಾರ್ವಜನಿಕರಿಗೆ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ನಂತರ ಜನರು ಪ್ರಸಾದವನ್ನು ಸ್ವೀಕರಿಸಿದರು.

 ಈ ಸಂದರ್ಭದಲ್ಲಿ  ಅಯೋಧ್ಯೆಗೆ 1992ರಲ್ಲಿ ಕರ ಸೇವಕರಾಗಿ ತೆರಳಿದ್ದ ಸತ್ಯನಾರಾಯಣ ರಾವ್, ಪಿ.ಸಿ. ಮಹಾಬಲೇಶ್ವರ ಪಟ್ಟೆ ಅವರುಗಳನ್ನು ಸಂಸ್ಥೆ ವತಿಯಿಂದ  ಸನ್ಮಾನಿಸಲಾಯಿತು.

error: Content is protected !!