ಜಿ.ಬೇವಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

ಜಿ.ಬೇವಿನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

ಮಲೇಬೆನ್ನೂರು, ಜ.19- ಜಿ.ಬೇವಿನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಕೆ.ರುದ್ರಗೌಡ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಕಮಲಮ್ಮ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನೂತನ ನಿರ್ದೇಶಕರಾದ ಬಿ.ರವಿಕುಮಾರ್, ಬಿ.ಕೆ.ಬಸವರಾಜ್, ಪಿ.ಸಿ.ಮಂಜುನಾಥ್, ಪಿ.ವಿಜಯಕುಮಾರ್, ಪಿ.ಮಲ್ಲನಗೌಡ, ಬಿ.ಕೆ.ಪ್ರಕಾಶ್, ಶ್ರೀಮತಿ ಗಂಗಮ್ಮ, ಎಂ.ಸುರೇಶ್, ಹೆಚ್.ಟಿ.ವೆಂಕಟೇಶ್, ಶ್ರೀಮತಿ ಸವಿತಾ ಮತ್ತು ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ಹಾಲು ಪರೀಕ್ಷಕ ಬಿ.ಜಿ.ಲಿಂಗರಾಜ್, ಸಹಾಯಕ ಪಿ.ಜಿ.ಸಿದ್ದನಗೌಡ ಮತ್ತು ಗ್ರಾಮದ ಮುಖಂಡರು ಈ ವೇಳೆ ಹಾಜರಿದ್ದರು.

error: Content is protected !!