ನಿರಾಶ್ರಿತರಿಗೆ ಹೊದಿಕೆ, ಊಟದ ವ್ಯವಸ್ಥೆ

ನಿರಾಶ್ರಿತರಿಗೆ ಹೊದಿಕೆ, ಊಟದ ವ್ಯವಸ್ಥೆ

ದಾವಣಗೆರೆ, ಜ. 16 – ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಾತೃ ದೇವೋ ಸಮಾಜ ಕಲ್ಯಾಣ ಮತ್ತು ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ ವತಿಯಿಂದ ರೈಲ್ವೇ ಸ್ಟೇಷನ್, ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್, ಹಳೇ ಬಸ್ ಸ್ಟಾಂಡ್, ಕೆ.ಆರ್. ತರಕಾರಿ ಮಾರ್ಕೆಟ್ ದಾರಿಯಲ್ಲಿ ಚಳಿಯಿಂದ ಬಳಲುತ್ತಾ ಮಲಗಿರುವವರಿಗೆ ಹಬ್ಬದ ಪ್ರಯುಕ್ತ ಊಟದ ವ್ಯವಸ್ಥೆ, ಹೊದಿಕೆಗಳನ್ನು ವಿತರಣೆ ಮಾಡುವ ಮುಖಾಂತರ ಸೇವೆಯನ್ನು ಸಲ್ಲಿಸಿದರು. 

ಈ ಸಂದರ್ಭದಲ್ಲಿ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಪರಶುರಾಮ್ ಜಿ.ಎಸ್. ರಾಘವೇಂದ್ರ, ಕೆ.ವಿ. ಕೊಟ್ರೇಶ್, ಡಿ.ಜೆ. ನವೀನ್, ಗುಬ್ಬಿ ಉಮೇಶ್ ಎನ್ ಭಾಗವಹಿಸಿದ್ದರು ಎಂದು ದಾವಣಗೆರೆ ಮಾತೃದೇವೋ ಸಮಾಜ ಕಲ್ಯಾಣ ಮತ್ತು ಶೈಕ್ಷಣಿಕ ಚಾರಿ ಟೇಬಲ್ ಟ್ರಸ್ಟ್‌ ಅಧ್ಯಕ್ಷ ಪೋತುಲ ಶ್ರೀನಿವಾಸ್ ತಿಳಿಸಿದರು.

error: Content is protected !!