ಹರಿಹರ : ಹೆಗಡೆ ಮಾತಿಗೆ ಮಾಜಿ ಶಾಸಕ ರಾಮಪ್ಪ ಆಕ್ರೋಶ

ಹರಿಹರ : ಹೆಗಡೆ ಮಾತಿಗೆ  ಮಾಜಿ ಶಾಸಕ ರಾಮಪ್ಪ ಆಕ್ರೋಶ

ಹರಿಹರ, ಜ. 15 – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಏಕವಚನದಲ್ಲಿ ನಿಂದನೆ ಮಾಡಿರುವುದನ್ನು ಮಾಜಿ ಶಾಸಕ ಎಸ್. ರಾಮಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸೇವೆ ಮಾಡಿದಷ್ಟು ಅನಂತ್ ಕುಮಾರ್‍ಗೆ ವಯಸ್ಸಾಗಿಲ್ಲ. ಇಂತಹ ವ್ಯಕ್ತಿ  ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಹುಡುಕಿಕೊಂಡು ಬಂದು ಹೊಡೆಯುತ್ತೇವೆ ಎಂದು ಏಕವಚನದಲ್ಲಿ ಎಚ್ಚರಿಕೆ ನೀಡಿದರು.

ಕೂಡಲೇ ಅನಂತ್ ಕುಮಾರ್ ಹೆಗಡೆ ಕ್ಷಮೆ ಕೇಳಬೇಕು, ಕೇಳದಿದ್ದಲ್ಲಿ ಉಗ್ರವಾದ ಹೋರಾಟವನ್ನು ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಗರಸಭಾ ಸದಸ್ಯ ಶಂಕರ್ ಖಟಾವಕರ್ ಮಾತನಾಡಿ  ಹೆಗಡೆಯವರನ್ನು ಪಕ್ಷದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು. ನಗರ ಸಭೆಯ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ ಮಾತನಾಡಿ, ಅನಂತ್ ಕುಮಾರ್ ಹೆಗಡೆಯವರ ಕ್ಷುಲ್ಲಕ ಹೇಳಿಕೆಯಿಂದ ನಾಲಿಗೆ ಹರಿಬಿಟ್ಟಿರುವುದನ್ನು ಖಂಡಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಫೈರೋಜ್ ಖಾನ್, ಸುರೇಶ್ ಹಾದಿಮನಿ, ಟಿ.ಜೆ. ಮುರುಗೇಶಪ್ಪ, ಬಾಲಾಜಿ, ಹನಗವಾಡಿ ಹನುಮಂತಪ್ಪ, ಹಂಚಿನ ನಾಗಣ್ಣ, ವೀರಣ್ಣ ಸೇರಿದಂತೆ ಇತರರಿದ್ದರು.

error: Content is protected !!