ಜಗಳೂರು ; ಜೀವ ವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷರಾಗಿ ಹನುಮಂತಪ್ಪ

ಜಗಳೂರು ; ಜೀವ ವಿಮಾ ಪ್ರತಿನಿಧಿಗಳ ಸಂಘದ ಅಧ್ಯಕ್ಷರಾಗಿ ಹನುಮಂತಪ್ಪ

ಜಗಳೂರು, ಜ.11- ಪಟ್ಟಣದ ಎಲ್ಐಸಿ ಕಚೇರಿಯಲ್ಲಿ ಇಂದು ಭಾರತೀಯ ಜೀವ ವಿಮಾ ನಿಗಮ ಉಪಗ್ರಹ ಸಂಪರ್ಕ  ಶಾಖೆ ತಾಲ್ಲೂಕು ಕಾರ್ಯಕಾರಿ ಸಮಿತಿ ಮಂಡಳಿಯ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಗ್ರಹ ಸಂಪರ್ಕ  ಶಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿ  ಡಿ.ಸಿ‌. ಶಿವಮೂರ್ತಿ ಅವರು ಚುನಾವಣಾ ಅಧಿಕಾರಿಯಾಗಿ, ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳ  ಹೆಸರನ್ನು ಘೋಷಿಸಿದರು.

ಅಧ್ಯಕ್ಷರಾಗಿ ಡಿ.ಆರ್. ಹನುಮಂತಪ್ಪ, ಗೌರವಾಧ್ಯಕ್ಷರಾಗಿ ಬಿ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಂ.ಆರ್‌ ರಂಗಸ್ವಾಮಿ, ಉಪಾಧ್ಯಕ್ಷರಾಗಿ ಎ. ರೇವಣಸಿದ್ದಪ್ಪ,  ಶಫೀಉಲ್ಲಾ  ಖಾನ್, ಖಜಾಂಚಿಯಾಗಿ ಹೆಚ್.ಎಸ್‌. ಪದ್ಮರಾಜ್, ಹಿರಿಯ ಸಲಹೆಗಾರ ಎನ್.ಸಿ. ಕಡ್ಲಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಶಾಖೆಯಲ್ಲಿ 180 ಜನ ಪ್ರತಿನಿಧಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಖಜಾಂಚಿ ಮಹದೇವಪ್ಪ, ಜಿಲ್ಲಾಧ್ಯಕ್ಷ ಪಂಪಣ್ಣ, ಎಲ್.ಐ.ಸಿ.  ಜಿಲ್ಲಾ ಎಓ ಸಿದ್ದರಾಮೇಶ್, ಕಾರ್ಯದರ್ಶಿ ಬಸವರಾಜ್, ಪ್ರತಿನಿಧಿಗಳಾದ ಎಸ್.ಮಂಜುನಾಥ್, ಎಂ.ಡಿ‌. ಅಬ್ದುಲ್ ರಖೀಬ್, ಕಿರಣ್, ಪಾಂಡುರಂಗ ರಾವ್, ಬಾಲಕೃಷ್ಣ,  ಬೋಸಪ್ಪ, ಭರ್ಮಪ್ಪ, ಸೇರಿದಂತೆ ಇತರೆ ಪ್ರತಿನಿಧಿಗಳು, ಮತ್ತಿತರರಿದ್ದರು.

error: Content is protected !!