ದಲಿತ್ ಇಂಡಿಯನ್ ಛೇಂಬರ್ ಇಂಡಸ್ಟ್ರಿ ಆಫ್ ಕಾಮರ್ಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಂಜುನಾಥ ಕಬ್ಬೂರು

ದಲಿತ್ ಇಂಡಿಯನ್ ಛೇಂಬರ್ ಇಂಡಸ್ಟ್ರಿ ಆಫ್ ಕಾಮರ್ಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಂಜುನಾಥ ಕಬ್ಬೂರು

ದಾವಣಗೆರೆ, ಜಿ.10- ದಲಿತ್ ಇಂಡಿಯನ್ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ  (ಡಿಐಸಿಸಿಐ) ವತಿಯಿಂದ ಉದ್ಯಮ ಸ್ಥಾಪನೆಗೆ ಇರುವ ಅವಕಾಶಗಳು ಮತ್ತು ಸಾಲ ಸೌಲಭ್ಯ ಕುರಿತು ನಗರದ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು  ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಉದ್ಘಾಟಿಸಿದರು. ಡಿಐಸಿಸಿಐ ಬುಡಕಟ್ಟು ವಿಭಾಗ‌ದ ರಾಷ್ಟ್ರೀಯ ಅಧ್ಯಕ್ಷ ಡಿ. ರಾಜಾನಾಯಕ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ್ಯಾಷನಲ್ ಎಸ್.ಸಿ./ಎಸ್.ಟಿ. ಹಬ್ ಶಾಖಾ ಮುಖ್ಯಸ್ಥರಾದ ಶ್ರೀಮತಿ ಎ. ಕೋಕಿಲಾ, ಕೆ.ಎಸ್.ಎಫ್.ಸಿ. ಶಾಖಾ ಮುಖ್ಯಸ್ಥ ಮಾಲತೇಶ್ ಬಿ. ಹೆಮ್ಮಾಡಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರಿ ಜಂಟಿ ನಿರ್ದೇಶಕ ರಾಜೇಂದ್ರ ನಾಮದೇವ್ ಕದಂ ಮತ್ತಿತರರು  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಲಿತ್ ಇಂಡಿಯನ್ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ  (ಡಿಐಸಿಸಿಐ) ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಂಜುನಾಥ ವೈ.‌ ಕಬ್ಬೂರು ಅವರನ್ನು ನೇಮಕ ಮಾಡಲಾಯಿತು.

error: Content is protected !!