‘ಸುರಕ್ಷಾ ದಾವಣಗೆರೆ’ ಆ್ಯಪ್ ಬಿಡುಗಡೆ – ಸುರಕ್ಷತೆ ದೃಷ್ಟಿಯಿಂದ ಆ್ಯಪ್ ಬಳಕೆಗೆ ಉಮಾ ಪ್ರಶಾಂತ್ ಕರೆ

‘ಸುರಕ್ಷಾ ದಾವಣಗೆರೆ’ ಆ್ಯಪ್ ಬಿಡುಗಡೆ – ಸುರಕ್ಷತೆ ದೃಷ್ಟಿಯಿಂದ ಆ್ಯಪ್  ಬಳಕೆಗೆ ಉಮಾ ಪ್ರಶಾಂತ್ ಕರೆ

ದಾವಣಗೆರೆ, ಡಿ.29- ನಗರದ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವ ಸುರಕ್ಷಾ ದಾವಣಗೆರೆ ಆಪ್ ಸುರಕ್ಷತೆಯ ದೃಷ್ಟಿ ಎಲ್ಲರಿಗೂ ಮುಖ್ಯವಾಗಿದೆ ಎಂದು   ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ನಗರದ ಯುಬಿಡಿಟಿ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್ ಅಭಿವೃದ್ಧಿ ಪಡಿಸಿರುವ ‘ಸುರಕ್ಷಾ ದಾವಣಗೆರೆ’ ಮೊಬೈಲ್ ಆಪ್ ಬಿಡು ಗಡೆ ಮಾಡಿ ಅವರು ಮಾತಾಡಿದರು.

ಸಂಕಷ್ಟದಲ್ಲಿರುವ ಜನತೆಗೆ ನೆರ ವಾಗುವ ನಿಟ್ಟಿನಲ್ಲಿ  ಸುರಕ್ಷಾ ದಾವಣ ಗೆರೆ’ ಮೊಬೈಲ್ ಆಪ್ ಅಭಿವೃದ್ಧಿ ಪಡಿಸಲಾಗಿದೆ. ಕೇವಲ ದಾವಣಗೆರೆ ನಗರದವರಷ್ಟೇ ಅಲ್ಲದೇ, ಜಿಲ್ಲೆಯ ಎಲ್ಲರೂ ಈ ಆಪ್ ಬಳಕೆ ಬಗ್ಗೆ ತಿಳಿ ದುಕೊಂಡು ಸದುಪಯೋಗ ಪಡೆ ದುಕೊಳ್ಳಬೇಕು ಎಂದು ಹೇಳಿದರು.

ಈ ಆಪ್ ಬಗ್ಗೆ ಜಾಗೃತಿ ಮೂಡಿಸಲು ಕಾಲೇಜುಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು  ಅನುಕೂಲವಾಗಲಿದೆ. ಈಗಾಗಲೇ 3 ಸಾವಿರಕ್ಕೂ ಹೆಚ್ಚು ಜನರು ತಮ್ಮ ಮೊಬೈಲ್‌ಗಳಲ್ಲಿ ಈ ಆಪ್  ಡೌನ್‌ಲೋಡ್ ಮಾಡಿಕೊಂಡಿದ್ದಾರೆ. 

ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿ ಈಗಾಗಲೇ ಸಾಕಷ್ಟು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಧಾವಿಸುವ 16 ಇಆರ್‌ಎಸ್‌ಎಸ್ ವಾಹನಗಳಿವೆ. ಸಾರ್ವಜನಿಕರು ಅವುಗಳ ಸೇವೆ ಬಳಸಿಕೊಳ್ಳಬೇಕು  ಎಂದು ಕಿವಿಮಾತು ಹೇಳಿದರು.

ಈ ವೇಳೆ ಸ್ಮಾರ್ಟ್‌ಸಿಟಿ ವ್ಯವಸ್ಥಾ ಪಕ ನಿರ್ದೇಶಕ ವೀರೇಶ್ ಕುಮಾರ್, ಹೆಚ್ಚುವರಿ ಎಸ್ಪಿಗಳಾದ ವಿಜಯ ಕುಮಾರ್ ಸಂತೋಷ್, ಮಂಜು ನಾಥ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಎಸ್. ಪ್ರಮುತೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಯುಬಿಡಿಟಿ ಕಾಲೇಜು ಪ್ರಾಂಶುಪಾಲ ಡಿ.ಪಿ. ನಾಗರಾಜಪ್ಪ, ಸ್ಮಾರ್ಟ್‌ಸಿಟಿ ಡಿಜಿಎಂ ಮಮತಾ ಇತರರು ಇದ್ದರು. 

error: Content is protected !!