ಮಲೇಬೆನ್ನೂರು : ಬೀರಲಿಂಗೇಶ್ವರ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷರಾಗಿ ಟಿ. ಗೋವಿಂದಪ್ಪ

ಮಲೇಬೆನ್ನೂರು : ಬೀರಲಿಂಗೇಶ್ವರ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷರಾಗಿ ಟಿ. ಗೋವಿಂದಪ್ಪ

ಉಪಾಧ್ಯಕ್ಷರಾಗಿ ಭಾನುವಳ್ಳಿಯ ಹೆಚ್‌.ಎಸ್‌. ಕರಿಯಪ್ಪ

ಮಲೇಬೆನ್ನೂರು, ಡಿ.28- ಇಲ್ಲಿನ ಶ್ರೀ ಬೀರಲಿಂಗೇಶ್ವರ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ ನೂತನ ಅಧ್ಯಕ್ಷರಾಗಿ ಭಾನುವಳ್ಳಿಯ ಟಿ. ಗೋವಿಂದಪ್ಪ ಮತ್ತು ಉಪಾಧ್ಯಕ್ಷರಾಗಿ ಭಾನುವಳ್ಳಿಯ ಹೆಚ್‌.ಎಸ್‌. ಕರಿಯಪ್ಪ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನಿತಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಸೊಸೈಟಿ ನಿರ್ದೇಶಕರಾದ ಸಂಸ್ಥಾಪಕ ಮಾಜಿ ಅಧ್ಯಕ್ಷ ಪಿ.ಎಸ್‌. ಹನುಮಂತಪ್ಪ, ಮಾಜಿ ಉಪಾಧ್ಯಕ್ಷ ಪಿ. ಹಾಲಪ್ಪ, ಕೊಕ್ಕನೂರಿನ ಮಹಾದೇವಪ್ಪ, ಬಿ.ಹೆಚ್. ನಾಗೇಂದ್ರಪ್ಪ, ಪಿ.ಎಸ್‌. ನಿಜಲಿಂಗಪ್ಪ,
ಭೋವಿ ಹನುಮಂತಪ್ಪ, ತಳವಾರ ಚಂದ್ರಪ್ಪ, ಶ್ರೀಮತಿ ಸುಧಾ ಪಿ.ಆರ್. ರಾಜು, ಶ್ರೀಮತಿ ಕಮಲಮ್ಮ ಧರ್ಮಪ್ಪ, ಭಾನುವಳ್ಳಿಯ ಹಣಚಿಕ್ಕಿ ಚಂದ್ರಪ್ಪ, ಶ್ರೀಮತಿ ಗಿರಿಜಮ್ಮ ಸಂಕೊಳ್ಳಿ ಶಿವನಗೌಡ, ಕಾರ್ಯದರ್ಶಿ ಎಂ. ಕರಿಯಪ್ಪ ಈ ವೇಳೆ ಹಾಜರಿದ್ದರು.

error: Content is protected !!