ಜಿಟ್ಟಿನಕಟ್ಟಿ ಮಂಜುನಾಥ್‌ಗೆ ಪ್ರಶಸ್ತಿ

ಜಿಟ್ಟಿನಕಟ್ಟಿ ಮಂಜುನಾಥ್‌ಗೆ ಪ್ರಶಸ್ತಿ

ಹರಪನಹಳ್ಳಿ, ಡಿ.24- ಬಳ್ಳಾರಿ ನಗರದ ಹೊಂಗಿರಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಅಕ್ಷಯ ಫೌಂಡೇಶನ್ ಹೈದ್ರಾಬಾದ್ ಮತ್ತು ಕರ್ನಾಟಕ  ರಾಜ್ಯ ವಾಲ್ಮೀಕಿ ನೌಕರರ ಒಕ್ಕೂಟ ಇವರ ವತಿಯಿಂದ ಹರಪನಹಳ್ಳಿ ತಾಲ್ಲೂಕಿನ ನ್ಯಾಯವಾದಿ, ಉಪನ್ಯಾಸಕ ಜಿಟ್ಟಿನಕಟ್ಟಿ ಹೆಚ್.ಕೆ.ಮಂಜುನಾಥ್‌ ಅವರಿಗೆ  ಶ್ರೀ ವಾಲ್ಮೀಕಿ  ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ  ಭಾರತ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ವಾಲ್ಮೀಕಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಟಿ.ಮೋಹನ ಕಿಶೋರ್, ನಿವೃತ್ತ ಮುಖ್ಯ ಶಿಕ್ಷಕ  ಬಾಲೇನಹಳ್ಳಿ ರೇವಣಸಿದ್ದಪ್ಪ, ಪಿಡಿಓ ಮಾರುತೇಶ್‌ ಕೆ, ನ್ಯಾಯವಾದಿ ಬಂಡ್ರಿ ಕೆ.ಆನಂದ, ಗ್ರಾಮ ಲೆಕ್ಕಾಧಿಕಾರಿ  ಹೆಚ್.ಅರುಣಕುಮಾರ್‌ ಸೇರಿದಂತೆ ಇತರರು ಇದ್ದರು.

error: Content is protected !!