ವೀರಶೈವ ಸಮಾಜದ ಅಧಿವೇಶನ ಚಳ್ಳಕೆರೆಯಲ್ಲಿ ಪ್ರಚಾರ ರಥಕ್ಕೆ ಚಾಲನೆ

ವೀರಶೈವ ಸಮಾಜದ ಅಧಿವೇಶನ ಚಳ್ಳಕೆರೆಯಲ್ಲಿ ಪ್ರಚಾರ ರಥಕ್ಕೆ ಚಾಲನೆ

ಚಳ್ಳಕೆರೆ, ಡಿ.19- ದಾವಣಗೆರೆಯಲ್ಲಿ ಇದೇ ದಿನಾಂಕ 23, 24 ರಂದು ಏರ್ಪಡಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನಕ್ಕೆ ತಾಲ್ಲೂಕು ಸಂಘದಿಂದ ಶಕ್ತಿ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಚಳ್ಳಕೆರೆ ತಾಲ್ಲೂಕಿನ ಲಿಂಗಾಯತ ಸಮುದಾಯ ದವರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ಕರೆ ಕೊಟ್ಟು ವೀರಶೈವ ರಥಕ್ಕೆ ತಾಲ್ಲೂಕು ಸಂಘದ ಅಧ್ಯಕ್ಷ ಕೆ.ಸಿ. ನಾಗರಾಜ್‌ ಚಾಲನೆ ನೀಡಿದರು.

ಸಂಘದ ಉಪಾಧ್ಯಕ್ಷ ಕೆ.ಎಂ. ಜಗದೀಶ್ ಮಾತನಾಡಿದರು. ಸಂಘದ ಕಾರ್ಯದರ್ಶಿ ಹೊಸಮನೆ ಸ್ವಾಮಿ, ಡಾ. ಕೆ.ಎಂ. ಜಯಕುಮಾರ್‌,  ಕೆ. ನಾಗೇಶ್‌, ರೇವಣಪ್ಪ, ರವಿಶಂಕರ್‌, ಎಲ್‌ಐಸಿ ಪ್ರಸನ್ನಕುಮಾರ್‌ ಕೆ.ಎಸ್‌. ಕಲ್ಮಾರ್‌ ರವಿಕುಮಾರ್‌, ಬಸವರಾಜಯ್ಯ, ಬಿ.ಪಿ. ಓಂಕಾರಪ್ಪ ಇನ್ನೂ ಮುಂತಾದವರು ಈ ಸಂದರ್ಭದಲ್ಲಿದ್ದರು.

error: Content is protected !!