ಬೇತೂರು ನೀಲಮ್ಮ ಪ್ರೌಢಶಾಲೆಯಲ್ಲಿ ಕಸಾಪ ಸಾಹಿತ್ಯೋತ್ಸವ ದತ್ತಿ ಉಪನ್ಯಾಸ

ಬೇತೂರು ನೀಲಮ್ಮ  ಪ್ರೌಢಶಾಲೆಯಲ್ಲಿ ಕಸಾಪ ಸಾಹಿತ್ಯೋತ್ಸವ ದತ್ತಿ ಉಪನ್ಯಾಸ

ದಾವಣಗೆರೆ, ಡಿ.12- ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಶ್ರೀಮತಿ ಬೇತೂರು ನೀಲಮ್ಮ  ಸಿದ್ದಬಸಪ್ಪ ಪ್ರೌಢಶಾಲೆ ಆನೆಕೊಂಡ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಇವರ ಸಂಯುಕ್ತ ಆಶ್ರಯದಲ್ಲಿ `ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ’ದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. 

ಶಾಲಾ ಮುಖ್ಯೋಪಾಧ್ಯಾಯ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು.  ತಾಲ್ಲೂಕು ಕಸಾಪ ನಿರ್ದೇಶಕ ಎಂ. ಷಡಕ್ಷರಪ್ಪ ಬೇತೂರು  ಪ್ರಾಸ್ತಾವಿಕವಾಗಿ ಮಾತನಾಡಿ  ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಹಾಗೂ ನಾಡು -ನುಡಿ ಸಂಸ್ಕೃತಿ  ಕಲೆಯ ಬಗ್ಗೆ ತಿಳಿಸಿದರು. 

ಎಆರ್‌ಜಿ ಕಾಲೇಜಿನ ನಿವೃತ್ತ  ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ
ಪ್ರೊ.  ಮಲ್ಲಿಕಾರ್ಜುನ ಹಲಸಂಗಿ, ದತ್ತಿ ಉಪನ್ಯಾಸ ಮಾಡಿ, ವಚನ ಸಾಹಿತ್ಯದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಕನ್ನಡ ನಾಡಿನ ವಚನಕಾರರ ಹಾಗೂ ವಚನ ಸಾಹಿತ್ಯದ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ನಿರ್ದೇಶಕರಾದ ಶ್ರೀಮತಿ ಸೌಭಾಗ್ಯಮ್ಮ ಉಪಸ್ಥಿತರಿದ್ದರು.

error: Content is protected !!