ವೀರಶೈವ ಲಿಂಗಾಯತ ಮಹಾಅಧಿವೇಶನಕ್ಕೆ ವಚನಾನಂದ ಶ್ರೀಗಳಿಗೆ ಆಮಂತ್ರಣ

ವೀರಶೈವ ಲಿಂಗಾಯತ ಮಹಾಅಧಿವೇಶನಕ್ಕೆ ವಚನಾನಂದ ಶ್ರೀಗಳಿಗೆ ಆಮಂತ್ರಣ

ದಾವಣಗೆರೆ, ಡಿ. 9 – ಇದೇ ದಿನಾಂಕ 23 ಹಾಗೂ 24ರಂದು ನಡೆಯಲಿರುವ 24ನೇ ವೀರಶೈವ ಲಿಂಗಾಯತ ಮಹಾಸಭಾದ ಮಹಾ ಅಧಿವೇಶನ ಕಾರ್ಯಕ್ರಮಕ್ಕೆ ಪಂಚಮಸಾಲಿ ಪೀಠದ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿಯವರನ್ನು ಆಮಂತ್ರಿಸಲಾಯಿತು.  ಈ ಸಂದರ್ಭದಲ್ಲಿ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಅಥಣಿ ವೀರಣ್ಣ,  ಅಣಬೇರು ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸನ್ನ, ವಕೀಲ ಪ್ರಕಾಶ್ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ರಮೇಶ್ ಬಿ.ಜೆ., ಕೆ.ಆರ್. ಸಿದ್ದೇಶ್,  ಸುಷ್ಮಾ ಪಾಟೀಲ್, ಶಿವರತನ್, ಸೌಮ್ಯ, ಸತೀಶ್ ಇತರರು ಹಾಜರಿದ್ದರು.

error: Content is protected !!