ಹರಪನಹಳ್ಳಿ : ಲೋಕ ಅದಾಲತ್‍ನಲ್ಲಿ 975 ಪ್ರಕರಣಗಳು ಇತ್ಯರ್ಥ

ಹರಪನಹಳ್ಳಿ : ಲೋಕ  ಅದಾಲತ್‍ನಲ್ಲಿ 975 ಪ್ರಕರಣಗಳು ಇತ್ಯರ್ಥ

ಹರಪನಹಳ್ಳಿ : ಲೋಕ ಅದಾಲತ್‍ನಲ್ಲಿ ಬಿರುಕು ಗೊಂಡಿದ್ದ ದಂಪತಿಗಳಿಗೆ ಒಗ್ಗೂಡಿಸುವಲ್ಲಿ ಯಶಸ್ವಿಯಾದ ನ್ಯಾಯಾಧೀಶರು

ಹರಪನಹಳ್ಳಿ, ಡಿ. 9 –  ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ  ನಡೆದ ತಾಲ್ಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ಹರಪನಹಳ್ಳಿ ಉಭಯ ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ನಡೆದ ಒಟ್ಟು 1245 ಪ್ರಕರಣಗಳನ್ನು ಕೈಗೆತ್ತಿಕೊಂಡು, 975 ಪ್ರಕರಣಗಳನ್ನು ಉಭಯ ನ್ಯಾಯಾಲಯದ ನ್ಯಾಧೀಶರುಗಳಾದ ಎಂ. ಭಾರತಿ, ಮತ್ತು ಫಕ್ಕೀರವ್ವ ಕೆಳಗೇರಿ ನ್ಯಾಯಾಧೀಶರುಗಳ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಪಟ್ಟಣದ ಉಭಯ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ಲ್ಲಿ ರಸ್ತೆ ಅಪಘಾತ, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಿ, ಜಮೀನು ವಿವಾದ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ಲಿ ಪ್ರಕರಣ, ಮೋಟಾರು ವಾಹನ, ಸಹಕಾರಿ ಬ್ಯಾಂಕುಗಳು,  ನಿವೇಶನ ಮಾರಾಟ ಒಳಗೊಂಡಂತೆ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ರಾದ ಎಂ.ಭಾರತಿ ರವರ ನ್ಯಾಯಾಲಯದಲ್ಲಿ ಒಟ್ಟು 559 ಪ್ರಕರಣಗಳ ಪೈಕಿ 431 ಪ್ರಕಣಗಳನ್ನು ಇತ್ಯರ್ಥ ಪಡಿಸಿ, ಒಟ್ಟು 85,14,251 ಲಕ್ಷ ರೂ.ಗಳು ರಸ್ತೆ ಅಫಘಾತ ಸೇರಿದಂತೆ ಇತರೆ  ಪ್ರಕರಣಗಳಿಂದ ಹಣದ ರೂಪದಲ್ಲಿ  ಇತ್ಯರ್ಥ ಪಡೆಸಿದರು. ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ರವರ ನ್ಯಾಯಾಲಯದಲ್ಲಿ ಒಟ್ಟು 686 ಪ್ರಕರಣಗಳ ಪೈಕಿ 544 ಪ್ರಕಣಗಳನ್ನು  ಇತ್ಯರ್ಥ ಪಡೆಸಿ, ಒಟ್ಟು 36,50,158  ಲಕ್ಷ ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡಿಸಿದರು. ಉಭಯ ನ್ಯಾಯಾಲದಲ್ಲಿ  ಒಟ್ಟು 975  ಪ್ರಕರಣ ಜೊತೆ ಉಭಯ ನ್ಯಾಯಾಲಯ ಗಳಿಂದ ಒಟ್ಟು 1,15,54,250 ರೂ.ಗಳ ಮೊತ್ತವನ್ನು  ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮತ್ತು ಕಿರಿಯ ಸಿವಿಲ್ ನ್ಯಾಯಾಲಯ ದಲ್ಲಿ ಸುಮಾರು ವರ್ಷಗಳಿಂದ ಬಿರುಕು ಗೊಂಡಿದ್ದ ದಾಂಪತ್ಯ ಜೀವನದ ಎರಡು ಜೋಡಿಗಳನ್ನು ಪರಸ್ಪರ ಹೊಂದಾಣಿಕೆ ಮಾಡಿಸಿ ಇಬ್ಬರ ಮನಸ್ಸನ್ನು ಬದಲಾಯಿಸಿ ನೂತನ ಜೀವನಕ್ಕೆ ನ್ಯಾಯಾಧೀಶರುಗಳು ಮನವೊಲಿಸಿ ಸತಿ-ಪತಿಗಳಿಗೆ ದಾಂಪತ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದ ವಕೀಲರುಗಳ ಮೂಲಕ ಸಂತೋಷ ವ್ಯಕ್ತಪಡಿಸಿ, ಸಿಹಿ ಹಂಚಿ ಸಂಭ್ರಮಿಸಿ ಒಗ್ಗೂಡಿಸಿ ಯಶ್ವಸಿಗೊಳಿಸಿ ದರು. ನಂತರ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳು ಬಿರುಕು ಗೊಂಡಿದ್ದ ದಾಂಪತ್ಯ ಜೀವನವನ್ನು ಮತ್ತೆ ಜೊತೆ ಗುಡಿಸುವಲ್ಲಿ ನ್ಯಾಯಾಧೀಶರುಗಳು ಯಶ್ವಸಿಯಾದರು.

 ತಾಲ್ಲೂಕಿನ ಜೆ.ಎಂ.ಎಪ್.ಸಿ ನ್ಯಾಯಾಲಯದ ಉಭಯ ನ್ಯಾಯಾಧೀಶರುಗಳು ಲೋಕ ಅದಾಲತ್‍ನಲ್ಲಿ ರಾಜಿ ಸಂಧಾನ ಮೂಲಕ  ಇತ್ಯರ್ಥ ಪಡಿಸಲು ಸಹಕರಿಸಿದ ವಕೀಲರಿಗೆ ಕಕ್ಷಿದಾರರಿಗೆ   ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ,  ಅಭಿನಂದನೆ ಸಲ್ಲಿಸಿದರು.  

 ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ. ಅಜ್ಜಣ್ಣ ಉಪಾಧ್ಯಕ್ಷ ಕೆ. ವಿರೂಪಾಕ್ಷಪ್ಪ,  ಕಾರ್ಯದರ್ಶಿ.ಕೆ. ಆನಂದ,  ಖಜಾಂಚಿ ರೇಣುಖಾ ಮೇಟಿ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ, ಹಿರಿಯ ವಕೀಲ ಪಿ. ಜಗದೀಶ್ ಗೌಡ್ರು, ಬಿ.ರೇವನಗೌಡ್ರು, ಟಿ.ವೆಂಕಟೇಶ್, ಕೆ. ಪ್ರಕಾಶ್, ಬಿ.ಗೋಣಿಬಸಪ್ಪ, ಎಸ್.ರುದ್ರಮನಿಸ್ವಾಮಿ,  ಎಸ್. ತಿಪ್ಪೇಸ್ವಾಮಿ, ಕೆ.ಎಸ್.ಮಂಜ್ಯಾನಾಯ್ಕ, ಮುತ್ತಿಗಿ. ರೇವಣಸಿದ್ದಪ್ಪ, ಎಂ.ಮೃಂತ್ಯುಜಯ್ಯ, ಎಸ್. ಜಾಕೀರ್,  ಬಿ.ಬಸವರಾಜ್, ಜಿ. ಹಾಲೇಶ್, ಕೆ.ಕೊಟ್ರೇಶ್, ಎ.ಕೆ.ಎನ್. ಮಲ್ಲಪ್ಪ ಡಿ. ಹನುಮಂತಪ್ಪ, ಸಣ್ಣ ನಿಂಗನಗೌಡ,  ಟಿ.ಎಂ.ಶ್ರೀಕಾಂತ್, ತೆಲಗಿ ಉಮೇಶ್,  ಜೆ. ಸೀಮಾ, ದ್ರಾಕ್ಷಾಯಣಮ್ಮ, ಬಿ.ತಿಪ್ಪೇಶ್, ಸಿದ್ದೇಶ್, ಹನುಮಂತಪ್ಪ , ಕಂಡ್ಯಪ್ಪ, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಕೋಟ್ರೇಶ್, ಬಸವರಾಜ್  ಹಾಗೂ  ಸೇರಿದಂತೆ  ನ್ಯಾಯಾಲಯದ ಸಿಬ್ಬಂದಿಗಳು  ಮತ್ತು ಇತರರು ಇದ್ದರು.

error: Content is protected !!