ಸಂವಿಧಾನ ಜಾರಿಯಿಂದ ಪ್ರತಿಯೊಬ್ಬರಿಗೂ ಸಮಾನತೆ ಸಿಕ್ಕಿದೆ

ಸಂವಿಧಾನ ಜಾರಿಯಿಂದ ಪ್ರತಿಯೊಬ್ಬರಿಗೂ ಸಮಾನತೆ ಸಿಕ್ಕಿದೆ

ಜಗಳೂರು : ಡಾ.ಬಿ.ಆರ್. ಅಂಬೇಡ್ಕರ್ ಅವರ  67ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಕೆ.ಪಿ‌. ಪಾಲಯ್ಯ

ಜಗಳೂರು, ಡಿ. 6 – ಸಂವಿಧಾನ ಜಾರಿಯಿಂದ ದೇಶದ ಪ್ರತಿಯೊಬ್ಬರಿಗೂ ಸಮಾನತೆಯ ಅಧಿಕಾರ ಸಿಕ್ಕಿದೆ. ಸಾಮಾನ್ಯ ಪ್ರಜೆಗೂ ಆಡಳಿತದ ಅಧಿಕಾರ ಲಭಿಸಲು ಹಾಗೂ  ಪುರುಷ, ಮಹಿಳೆಯರಿಗೂ ಸೇರಿದಂತೆ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಚಲಾಯಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಕೆ.ಪಿ‌. ಪಾಲಯ್ಯ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿ ಪರ‌ ಸಂಘಟನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ  67ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ಪೂರ್ವದಲ್ಲಿ ಮತದಾನದ ಹಕ್ಕು ಕೇವಲ  ಒಂದು ವರ್ಗಕ್ಕೆ ಸೀಮಿತ ವಾಗಿತ್ತು ಹಾಗೂ ರಾಜಮನೆತನದವರು ವಂಶ ಪರಂಪರೆಯಾಗಿ ಪರ್ಯಾಯವಾಗಿ   ಆಡಳಿತದ ಅಧಿಕಾರ ಅನುಭವಿಸುತ್ತಿದ್ದರು. ಆದರೆ ಸಂವಿಧಾನ ಜಾರಿಗೆ ಬಂದ ನಂತರ ಸ್ಥಳೀಯ ಆಡಳಿತ ವಿಕೇಂದ್ರೀಕರಣದಲ್ಲಿ  ಸಾವಿರಾರು ಜನ ಅಧಿಕಾರ ಅನುಭವಿಸಿ ದ್ದರೂ ಪ್ರಜಾಪ್ರಭುತ್ವಕ್ಕೆ ಕಾರಣವಾದ ಬಾಬಾ ಸಾಹೇಬರನ್ನು ಮಾತ್ರ ಯಾರೋ ಬ್ಬರೂ ಸ್ಮರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿ ಸಿದರು. ಮಹಿಳೆಯರು ಒಳಗೊಂಡಂತೆ ಶೋಷಿತ ವರ್ಗಕ್ಕೆ ವಿದ್ಯಾಭ್ಯಾಸಕ್ಕೆ ನಿರಾಕರಣೆ ಯಿದ್ದ ಸಂದರ್ಭದಲ್ಲಿ ಬಾಬಾಸಾಹೇಬರು ವಿದೇಶದಲ್ಲಿ ಅಭ್ಯಾಸ ಮಾಡಿ ದೇಶಕ್ಕೆ ಸಂವಿಧಾನ ರಚಿಸಿದ ಮಹಾನಾಯಕ ರಾಗಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವುದು ಡಾ.ಬಿ.ಆರ್‌. ಅಂಬೇಡ್ಕರ್ ಅವರ ಸಂವಿಧಾನದ ಕೊಡುಗೆಯಿಂದ. ನನ್ನ ಆಡಳಿತಾವಧಿಯಲ್ಲಿ ಪಟ್ಟಣದ ಕೇಂದ್ರ ಸ್ಥಾನದಲ್ಲಿ  ಪುತ್ಥಳಿ ನಿರ್ಮಿಸಿ ಋಣ ತೀರಿಸಿರುವೆ ಎಂದರು.

ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ  ಭಿಕ್ಷೆಯಿಂದ ನಾವು ಬದುಕುತ್ತಿದ್ದೇವೆ, ಅವರ ಜೀವಿತಾವಧಿಯಲ್ಲಿ ಅಂದಿನ ಸಮಾಜದಲ್ಲಿ ಅನುಭವಿಸಿದ ಸಾಮಾಜಿಕ ಶೋಷಣೆ, ಅಸ್ಪೃಶ್ಯತೆ, ಉಪ ದ್ರವಗಳು, ಸಂಕಷ್ಟಗಳನ್ನು ನೈಜ ಜೀವನಾ ಧಾರಿತ ಧಾರಾವಾಹಿ ಮಹಾನಾಯಕದಲ್ಲಿ ಚಿತ್ರೀಕರಣಗೊಂಡಿದೆ. ಪ್ರತಿಯೊಬ್ಬರೂ ವೀಕ್ಷಿಸಿ ಮನಗಾಣಬೇಕಿದೆ ಎಂದರು.

ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ಬಾಬಾಸಾಹೇಬರ  ಜನ್ಮ, ವಿದ್ಯಾಭ್ಯಾಸ, ಬೌದ್ದಧರ್ಮ ಸ್ವೀಕಾರ, ಐಕ್ಯ ಹಾಗೂ ಅಂತ್ಯ-ಸಂಸ್ಕಾರವಾದ ಸ್ಥಳ ಗಳು ಅವರ ಅನುಯಾಯಿಗಳಿಗೆ ಇಂದಿಗೂ ಪುಣ್ಯ ಭೂಮಿಗಳಾಗಿವೆ ಎಂದರು.

ಪೊಲೀಸ್  ನಿರೀಕ್ಷಕ  ಶ್ರೀನಿವಾಸ್ ರಾವ್ ಮಾತನಾಡಿ, ಅಂಬೇಡ್ಕರ್ ಆಶಯದಂತೆ ಎಲ್ಲಾ ಸಮುದಾಯದವರು  ಶಿಕ್ಷಣಕ್ಕೆ ಒತ್ತು ನೀಡಬೇಕಿದೆ ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ  ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿ.ಎಸ್.ಎಸ್. ತಾಲ್ಲೂಕು ಅಧ್ಯಕ್ಷ ಕುಬೇಂದ್ರಪ್ಪ, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ತುಪ್ಪದಹಳ್ಳಿ ಸಿದ್ದಪ್ಪ, ಮುಖಂಡ ರಾಜಪ್ಪ ವ್ಯಾಸಗೊಂಡನಹಳ್ಳಿ, ಸಿ. ತಿಪ್ಪೇಸ್ವಾಮಿ, ಸಾಹಿತಿ ಎನ್.ಟಿ. ಎರಿಸ್ವಾಮಿ, ಮಾದಿಹಳ್ಳಿ ಮಂಜುನಾಥ್, ಬಿ. ಮಹೇಶ್ವ ರಪ್ಪ, ಗೌರಿಪುರ ಕುಬೇರಪ್ಪ, ಸಿದ್ದಮ್ಮನಹಳ್ಳಿ ವೆಂಕಟೇಶ್, ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಲೋಹಿತ್ ಮುಂತಾದವರು ಇದ್ದರು.

error: Content is protected !!