ಹರಪನಹಳ್ಳಿಯಲ್ಲಿ ಶಿವಶರಣ ಮೇದಾರ ಕೇತೇಶ್ವರ ಜಯಂತೋತ್ಸವ

ಹರಪನಹಳ್ಳಿಯಲ್ಲಿ ಶಿವಶರಣ  ಮೇದಾರ ಕೇತೇಶ್ವರ ಜಯಂತೋತ್ಸವ

ಹರಪನಹಳ್ಳಿ, 28.  – ಇಲ್ಲಿನ ಮೇದಾರ ಸಮಾಜದ ವತಿಯಿಂದ ಶಿವಶರಣ ಮೇದಾರ ಕೇತೇಶ್ವರ 893ನೇ ಜಯಂತೋತ್ಸವವನ್ನು ಹಡಗಲಿ ರಸ್ತೆಯಲ್ಲಿ ಆಚರಿಸಲಾಯಿತು. ಸಮಾಜದ ಕಾರ್ಯದರ್ಶಿ ಎಂ. ಮಾರುತಿ ಮಾತನಾಡಿ, ನಮಗೆ ನಮ್ಮ ಕುಲದೇವತೆ ನಮ್ಮ ಕುಲ ಗುರುಗಳ ಆಚರಣೆ ಸೂಕ್ತ ಸ್ಥಳವಿಲ್ಲದೆ   ಬೀದಿಯಲ್ಲಿ ಆಚರಣೆ ಮಾಡುವ ಅನಿವಾರ್ಯತೆ ಎದುರಾಗಿದೆ. ನಮ್ಮ ಸಮಾಜಕ್ಕೆ ಮಲ್ಲಮ್ಮನ ದೇವಸ್ಥಾನ ಕಟ್ಟಿಸಲು ಸರ್ಕಾರದ ಅಧೀನದಲ್ಲಿರುವ ಯಾವುದಾದರೂ ಒಂದು ಜಾಗವನ್ನು ಮೇದಾರ ಸಮಾಜಕ್ಕೆ ನೀಡಬೇಕೆಂದು ಸ್ಥಳೀಯ ಶಾಸಕರಿಗೆ ಮತ್ತು ಪುರಸಭೆಯವರಿಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಕೆ. ಕೃಷ್ಣಪ್ಪ ಉಪಾಧ್ಯಕ್ಷ ಬಸವರಾಜ್ ತಿರುಕಪ್ಪ ಮತ್ತು ಸದಸ್ಯರು ಚಿದಾನಂದ ರಮೇಶ್ ಬಾಬು ನವೀನ್ ಕುಮಾರ್ ರಾಘವೇಂದ್ರ ಮೈಲಾರಪ್ಪ ನಾಗರಾಜ್ ರಾಜು ಸೇರಿದಂತೆ ಇತರರು ಇದ್ದರು.

error: Content is protected !!