ಮಲೇಬೆನ್ನೂರು, ನ.26- ಭಾನುವಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಶ್ರೀ ರಾಜವೀರ ಮದಕರಿ ನಾಯಕ ಯುವ ಸೇನಾ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಾಲ್ಮೀಕಿ ಪ್ರತಿಮೆಯ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಕನ್ನಡ ತಾಯಿ ಭುವನೇಶ್ವರಿ ಮತ್ತು ಮದಕರಿ ನಾಯಕರ ಭಾವಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಹರಿಹರ ತಾ. ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಗ್ರಾಮದ ಹಿರಿಯರಾದ ಟಿ.ಪುಟ್ಟಪ್ಪ, ದೊಡ್ಡಮನಿ ಸಿದ್ದಪ್ಪ, ಶಿಕ್ಷಕ ಟಿ.ಮಾರುತಿ, ಮಂಜಪ್ಪ ಹೊಸಳ್ಳಿ, ಕೆ.ಮಂಜುನಾಥ್, ಕುಂಬಾರ್ ಬಸವರಾಜ್, ಫೋಟೋ ಪ್ರಕಾಶ್, ಹೊಸಳ್ಳಿ ನಾರಾಯಣಸ್ವಾಮಿ, ಮಾಕನೂರು ಹನುಮಂತ, ತಿರುಕಪ್ಪರ ಬಸವರಾಜ್, ಚಳಗೇರಿ ಆಂಜನೇಯ, ಕೋಟ್ಯಾಳ ಚಂದ್ರಪ್ಪ, ಗ್ರಾ.ಪಂ. ಸದಸ್ಯರಾದ ಟಿ.ಧನ್ಯಕುಮಾರ್, ಶಿವು ಬೆಳಕೊಂಡರ, ಜಿಗಳಿಯ ಕೆ.ಎಸ್.ನಂದ್ಯಪ್ಪ, ಶಿಕ್ಷಕ ಜಿ.ಆರ್.ನಾಗರಾಜ್, ಪುಟ್ಟಣ್ಣರ ಬಸವರಾಜ್, ಮಲೇಬೆನ್ನೂರಿನ ವೇರ್ಹೌಸ್ ಬಸವರಾಜ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.