ಕಲಾವಿದ ಸೊಲಬಕ್ಕ ಸ್ಮರಣಾರ್ಥ

ಕಲಾವಿದ ಸೊಲಬಕ್ಕ ಸ್ಮರಣಾರ್ಥ

ದಾವಣಗೆರೆ, ನ.23-  ಕಲಾವಿದ ದಿ. ಸೊಲಬಕ್ಕನವರ್ ಅವರ ತೃತೀಯ ಪುಣ್ಯಾರಾಧನೆ ಅಂಗವಾಗಿ ಗೊಟಗೋಡಿಯ ಶಿಲ್ಪಕಲಾ ಕುಟೀರದಲ್ಲಿ  ಆಯೋಜಿಸಿದ್ದ ಕಲಾ ಶಿಬಿರ `ಕಲಾಯಾನ’ವನ್ನು ಹಿರಿಯ ಕಲಾವಿದ  ಎ.ಮಹಾಲಿಂಗಪ್ಪ ಉದ್ಘಾಟಿಸಿದರು. ಕಲ್ಯಾಣನಗರ ಹುಬ್ಬಳ್ಳಿಯ ರಾಮಕೃಷ್ಣ ಆಶ್ರಮದ ಶ್ರೀ ರಘುವೀರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವೇದಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್‌ ಕುಲಕರ್ಣಿ, ಕೋಟೆಪ್ಪ ಮಾಸ್ತರ್,  ಬೆಳಗಲಿ ಶ್ರೀಶೈಲ ಹುದ್ದಾರ್, ಶ್ರೀಮತಿ ಸಾವಿತ್ರಮ್ಮ ಸೊಲಬಕ್ಕನವರ್, ಹಿರಿಯ ರಂಗಕರ್ಮಿ ಬಸವರಾಜ ಬೆಂಗೇರಿ, ಕಲಾವಿದ ಕರಿಯಪ್ಪ ಹಂಚಿನಮನಿ, ರಾಜಹರ್ಷ ದಂಪತಿಗಳು  ಉಪಸ್ಥಿತರಿದ್ದರು.    

error: Content is protected !!