ಹರಿಹರ : ಬಿಜೆಪಿ ಕಾರ್ಯಕರ್ತರಿಂದ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಸನ್ಮಾನ

ಹರಿಹರ : ಬಿಜೆಪಿ ಕಾರ್ಯಕರ್ತರಿಂದ  ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಸನ್ಮಾನ

ಭದ್ರಾ ನಾಲೆ ನೀರು ಮುಂದುವರೆಸಲು ಮನವಿ

ಮಲೇಬೆನ್ನೂರು, ನ.17- ಬಿಜೆಪಿ ಮುಖಂಡ ಚಂದ್ರಶೇಖರ್‌ ಪೂಜಾರ್‌ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಬೆಂಗಳೂರಿನಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಸನ್ಮಾನಿಸಿ, ಅಭಿನಂದಿಸಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಹರಿಹರ ನಗರಸಭೆ ಸದಸ್ಯ ರಜನಿಕಾಂತ್‌, ಬೇಕರಿ ರಾಘವೇಂದ್ರ, ವಕೀಲ ಆನಂದ್‌, ಪೂಜಾರ್‌ ರಾಜು, ಕೀರ್ತಿಕುಮಾರ್‌, ದೀಟೂರು ನಿರಂಜನ್‌, ಚಂದ್ರ ಪಾಟೀಲ್‌, ಮಲೇಬೆನ್ನೂರಿನ ಮುದೇಗೌಡ್ರ ತಿಪ್ಪೇಶ್‌, ಬಿ. ಮಂಜುನಾಥ್‌, ಓ.ಜಿ. ಕುಮಾರ್‌, ಬಿ. ಸುರೇಶ್‌, ಪಿ.ಆರ್‌. ರಾಜು, ಎ.ಕೆ. ಲೋಕೇಶ್‌, ಎ.ಕೆ. ನಾಗರಾಜ್‌, ಕಜ್ಜರಿ ಹರೀಶ್‌, ಗೌಡ್ರ ಶ್ರೀನಿವಾಸ್‌, ಕೊಮಾರನಹಳ್ಳಿಯ ಮಡಿವಾಳರ ಬಸವರಾಜ್‌, ಜಿಗಳಿ ಹನುಮಗೌಡ, ಜಿ.ಎಂ. ಬಸವನಗೌಡ, ಹಳ್ಳಿಹಾಳ್‌ ನಟರಾಜ್‌, ಕೊಕ್ಕನೂರು ನಿಂಗನಗೌಡ, ಗೋವಿನಹಾಳ್‌ ದಡ್ಡಿ ರಾಜೀವ್‌, ಕೆ.ಎನ್‌. ಹಳ್ಳಿಯ ಹುಗ್ಗಿ ಮಹಾಂತೇಶ್‌, ಹರೀಶ್‌ ದೀಟೂರು ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು. 

ಈ ವೇಳೆ ಚಂದ್ರಶೇಖರ್‌ ಪೂಜಾರ್‌ ಅವರು ಭದ್ರಾ ಬಲದಂಡೆ ನಾಲೆ ಯಲ್ಲಿ ನವೆಂಬರ್ 30 ರವರೆಗೆ ನೀರು ಹರಿಸುವಂತೆ ಡಿಸಿಎಂ ಡಿ.ಕೆ. ಶಿವ ಕುಮಾರ್‌ ಅವರಿಗೆ ಹೇಳುವಂತೆ ವಿಜಯೇಂದ್ರ ಅವರಿಗೆ ಮನವಿ ಮಾಡಿದರು.

ನಂತರ ಈ ತಂಡವು ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಬೇಗ ಗುಣಮುಖರಾಗುವಂತೆ ಹೇಳಿದರು.

error: Content is protected !!