30 ರವರೆಗೆ ಭದ್ರಾ ನೀರು ಹರಿಸುವಂತೆ ಡಿಸಿಎಂಗೆ ನಂದಿಗಾವಿ ಶ್ರೀನಿವಾಸ್ ಮನವಿ

30 ರವರೆಗೆ ಭದ್ರಾ ನೀರು ಹರಿಸುವಂತೆ ಡಿಸಿಎಂಗೆ ನಂದಿಗಾವಿ ಶ್ರೀನಿವಾಸ್ ಮನವಿ

ಹರಿಹರ, ನ.17- ತಾಲ್ಲೂಕಿನ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಮೂಲದ ಬೆಳೆಗಳಿಗೆ ನವೆಂಬರ್ 30 ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಕೋರಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರನ್ನು  ತಾಲ್ಲೂಕಿನ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಭೇಟಿ ಮಾಡಿ ಮನವಿ ಸಲ್ಲಿಸಿದರು. 

 ಮನವಿಗೆ ಡಿ.ಸಿ.ಎಂ. ಡಿ.ಕೆ. ಶಿವಕುಮಾರ್ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿರುವ ಶ್ರೀನಿವಾಸ್,  ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಮತ್ತು ಮಧು ಬಂಗಾರಪ್ಪ  ಅವರನ್ನೂ  ಸಹ ಭೇಟಿ ಮಾಡಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

error: Content is protected !!