ದಾವಣಗೆರೆ, ನ.15- ಬಿಜೆಪಿಯ ಮೂಲ ಮತ್ತು ಹಳೆಯ ಕಾರ್ಯಕರ್ತರ ಸಭೆಯು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ನಡೆಯಿತು.
ಸಭೆಯ ನೇತೃತ್ವವನ್ನು ಕೃಷ್ಣಮೂರ್ತಿ ಪವಾರ್ ವಹಿಸಿದ್ದರು. ಅಧ್ಯಕ್ಷತೆಯನ್ನು ಜಿ.ಪಂ. ಮಾಜಿ ಸದಸ್ಯ ಜಗಳೂರಿನ ಎಸ್.ಕೆ. ಮಂಜುನಾಥ್ ವಹಿಸಿದ್ದರು.ಗೋಪಾಲ್ರಾವ್ ಸಾವಂತ್ ಸ್ವಾಗತಿಸಿದರು. ಆನೆಕಲ್ ಚಂದ್ರ ನಾಯ್ಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಿ.ಹೆಚ್. ಲಿಂಗರಾಜು, ಕೃಷ್ಣಮೂರ್ತಿ ಪವಾರ್, ಜಗಳೂರಿನ ಶಿವಕುಮಾರ ಸ್ವಾಮಿ ಮಾತನಾಡಿ, ಲೋಕಸಭಾ ಸದಸ್ಯರು ಮತ್ತು ಶಾಸಕರ ವಿರುದ್ಧ ಅಸಮಾಧಾನವನ್ನು ಹೊರಹಾಕಿದರು. ಕಾರ್ಯಕರ್ತರ ಬಲಿದಾನ ದಿಂದ ಅಧಿಕಾರಕ್ಕೆ ಬಂದವರು ಅವರ ಕುಟುಂಬದವರ ಕಣ್ಣೀರು ಒರೆಸುವಂತಹ ಕೆಲಸ ಮಾಡಲಿಲ್ಲ ಎಂದು ಕಿಡಿ ಕಾರಿದರು.
ಮಾಜಿ ಉಪಮಹಾಪೌರ ಪಿ.ಎಸ್. ಜಯ್ಯಣ್ಣ, ಕಡ್ಲೇಬಾಳು ಹೆಚ್.ಎಸ್. ಬಸವರಾಜು, ಗುಬ್ಬಿ ಬಸವರಾಜ್, ಹರಪನಹಳ್ಳಿಯ ಜಗದೀಶ್, ಚನ್ನಬಸಪ್ಪ ಆನೆಕೊಂಡ, ಎಸ್.ಕೆ. ಮಂಜುನಾಥ್, ಹಿರೇಅರಕೆರೆಯ ಹೆಚ್.ಎಂ. ನಾಗರಾಜ, ತುಪ್ಪದಹಳ್ಳಿ ಕೆ.ಬಿ. ಶಿವಕುಮಾರ್, ಹರಿಹರದ ಶಂಕರ್ ಸಾ ಲದ್ವಾ, ನರಗನಹಳ್ಳಿಯ ಎಂ.ಬಿ.ಬಸವಂತಪ್ಪ, ಸಾಸ್ವೆಹಳ್ಳಿಯ ಆರ್. ತಿಪ್ಪೇಶ್, ನಾಗರಾಜ್ ಇ.ಹೆಚ್, ಸರೋಜಮ್ಮ ದೀಕ್ಷಿತ್, ಕೆ.ಟಿ. ಕಲ್ಲೇಶ್, ಕಿರೀಟ್ ಕಲಾಲ್, ಬಾಳೇಕಾಯಿ ಉಮಾಪತಿ, ಆರ್. ಗೋವಿಂದರಾಜ್, ಎಸ್. ದೇವರಾಜ್ ಪಾಳೇಗಾರ್, ನಿಂಗರಾಜ್ ಹಾವನೂರ್, ಕೆ.ಎನ್. ವೆಂಕಟೇಶ್ ಮತ್ತಿತರರು ಮಾತನಾಡಿದರು.