ಮಲೇಬೆನ್ನೂರು ನ. 15 – ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನ ಮತ್ತು ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಗೋ ಪೂಜೆ ಮಾಡಲಾಯಿತು. ಗೋವಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಅಕ್ಕಿ, ಬೆಲ್ಲ, ಬಾಳೆಹಣ್ಣುಗಳನ್ನು ತಿನ್ನಿಸಲಾಯಿತು. ಮಲೇಬೆನ್ನೂರಿನ ಕೆ.ಜಿ. ಪರಮೇಶ್ವರಪ್ಪ ಕೊಮಾರನಹಳ್ಳಿಯಲ್ಲಿ ಜಿ. ಮಂಜುನಾಥ್ ಪಟೇಲ್, ಐರಣಿ ಅಣ್ಣಪ್ಪ, ಮಡವಾಳರ ಬಸವರಾಜ್, ಸಿಂಗಟಗೇರೆ ರಂಗಪ್ಪ, ಮಡಿವಾಳರ ರಂಗನಾಥ್, ಶಿಕ್ಷಕ ಪಾರೇರ ರಾಜಪ್ಪ, ಹಸು ಮಾಲೀಕ ಎಸ್. ರಾಜಪ್ಪ, ದೇವಸ್ಥಾನ ಶಾನಭೋಗ್ ಧರ್ಮರಾವ್, ಮುಖ್ಯ ಅರ್ಚಕ ಮಂಜುನಾಥಚಾರ್, ಗುರುನಾಥಚಾರ್, ಗ್ರಾಮದ ಲೆಕ್ಕಾಧಿಕಾರಿ ಅಣ್ಣಪ್ಪ ಹಾಗೂ ನಾಡ ಕಛೇರಿ ಸಿಬ್ಬಂದಿ ಈ ವೇಳೆ ಹಾಜರಿದ್ದರು.
ಕೊಮಾರನಹಳ್ಳಿಯಲ್ಲಿ ಗೋ ಪೂಜೆ
![18 komaranahalli gopooje 16.11.2023 ಕೊಮಾರನಹಳ್ಳಿಯಲ್ಲಿ ಗೋ ಪೂಜೆ](https://janathavani.com/wp-content/uploads/2023/11/18-komaranahalli-gopooje-16.11.2023-860x522.jpg)