ಸೋಮೇಶ್ವರ ಗಾನಸಿರಿ ಪ್ರಶಸ್ತಿ ಮುಡಿಗೇರಿಸಿಕೊಂಡ ದಾನವಿ, ಗೌತಮಿ

ಸೋಮೇಶ್ವರ ಗಾನಸಿರಿ ಪ್ರಶಸ್ತಿ ಮುಡಿಗೇರಿಸಿಕೊಂಡ ದಾನವಿ, ಗೌತಮಿ

ದಾವಣಗೆರೆ, ನ. 13 – ನಿಟ್ಟುವಳ್ಳಿ ಮುಖ್ಯರಸ್ತೆಯ ನೇತ್ರಾವತಿ ಕನ್ವೆನ್ಷನ್ ಹಾಲ್‌ನಲ್ಲಿ ಶ್ರೀ ಸೋಮೇಶ್ವರ ವಿದ್ಯಾಲಯದ ವತಿಯಿಂದ ಜಿಲ್ಲಾ ಅಂತರ್ ಶಾಲಾ ಮಟ್ಟದ ಶ್ರೀ ಸೋಮೇಶ್ವರ ಗಾನಸಿರಿ ಕಾರ್ಯಕ್ರಮ ನಡೆಯಿತು. 

ಪೋಷಕರಾದ ಶ್ರೀಮತಿ ಜಯಶೀಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ. ಎಂ. ಸುರೇಶ್,  ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ವಿನೂತನ ಕಾರ್ಯಕ್ರಮ, ಶಾಲೆಗಳಲ್ಲಿರುವ ಪ್ರತಿಭೆಗಳನ್ನು ಹೊರಜ ಗತ್ತಿಗೆ ಪರಿಚಯಿಸುವ  ಕಾರ್ಯಕ್ರಮವಾಗಿದೆ ಎಂದರು. 

ಹಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ 5 ಸಾವಿರ ನಗದು, ಸೋಮೇಶ್ವರ ಗಾನಸಿರಿ ಪ್ರಶಸ್ತಿ, ಫಲಕ ಒಳಗೊಂಡ ಪ್ರಥಮ ಬಹುಮಾನಕ್ಕೆ ಕು. ದಾನವಿ ಆಯ್ಕೆಯಾದರು. ಇನ್ನೂ 3 ಸಾವಿರ ನಗದು ಪ್ರಶಸ್ತಿ ಫಲಕ ಒಳಗೊಂಡ ದ್ವಿತೀಯ ಬಹುಮಾನ ಕು. ಗೌತಮಿ ಹೆಚ್. ಆರ್ ಪಡೆದರೇ ತೃತೀಯ ಬಹುಮಾನಕ್ಕೆ  ಕು. ಸಮ್ಮಿತ್ ಎಸ್. ಮುತಾಲಿಕ್, ಧ್ಯಾನ್ ಆಯ್ಕೆಯಾದರು. 

ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಖುಷಿ ಟಿ. ಪಿ, ದ್ವಿತೀಯ ಸ್ಥಾನ ಕು. ಗಾನವಿ ಇನ್ನೂ ತೃತೀಯ ಸ್ಥಾನಕ್ಕೆ ಕು. ಅನ್ವಯಿ, ಕು. ಚಿನ್ಮಯಿ ಎ. ಎನ್ ಆಯ್ಕೆಯಾದರು. 

ತೀರ್ಪುಗಾರರಾಗಿ ಕರ್ನಾಟಕ ಸಂಗೀತ ವಿದುಷಿ, ಶ್ರೀಮತಿ ರಜನಿ ರಘುನಾಥ್ ಕುಲಕರ್ಣಿ, ವೀಣಾ ವಿದ್ವಾಂಸಕರಾದ ಶ್ರೀಮತಿ ಗೀತಾ ಮಾಲತೇಶ್ ಆಗಮಿಸಿದ್ದರು.  ಈ ವೇಳೆ  ಪ್ರಾಂಶುಪಾಲರಾದ ಶ್ರೀಮತಿ ಪ್ರಭಾವತಿ, ಆಡಳಿತಾಧಿಕಾರಿ ಹರೀಶ್ ಬಾಬು ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!