ಹರಪನಹಳ್ಳಿಯಲ್ಲಿ ನಾಳೆ ರಸಮಂಜರಿ ಕಾರ್ಯಕ್ರಮ

ಹರಪನಹಳ್ಳಿಯಲ್ಲಿ ನಾಳೆ  ರಸಮಂಜರಿ ಕಾರ್ಯಕ್ರಮ

ಹರಪನಹಳ್ಳಿ, ನ.13- ದೀಪಾವಳಿ ಹಬ್ಬದ ಪ್ರಯುಕ್ತ ಯೋಗ ನರಸಿಂಹ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಹಾಗೂ ವೈ.ಡಿ. ಅಣ್ಣಪ್ಪ ಸಮಾಜಮುಖಿ ಟ್ರಸ್ಟ್ ವತಿಯಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ನಾಡಿದ್ದು ದಿನಾಂಕ 15 ರ ಬುಧವಾರ ಸಂಜೆ 4 ಗಂಟೆಗೆ ವೈ. ಡಿ. ಅಣ್ಣಪ್ಪ ಸಮಾಜಮುಖಿ ಟ್ರಸ್ಟ್‌ನಿಂದ ವಿವಿಧ ತಂಡಗಳಿಂದ ರಸಮಂಜರಿ ಕಾರ್ಯಕ್ರಮ ನಡೆೇಯುವುದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ, ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ, ಸೌಹಾರ್ದ ಬ್ಯಾಂಕ್ ಅಧ್ಯಕ್ಷ ವೈ. ಡಿ.ಅಣ್ಣಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ವೈ.ಎ. ಲಕ್ಷ್ಮಿದೇವಿ ಅಣ್ಣಪ್ಪ, ಜ್ಯೋತೆಮ್ಮ, ಹರಿಯಮ್ಮನಹಳ್ಳಿ ಮಹಾಂತೇಶ್, ಸುರೇಶ್, ಮಾರುತಿ, ಸಂತೋಷ್, ಪರಶುರಾಮ್, ಶಶಿಕುಮಾರ್, ಶಿವು, ಕೆಂಚಪ್ಪ, ಬರ್ಕತ್‌ ಅಲಿ, ಶ್ರೀನಿವಾಸ್, ದುರುಗಪ್ಪ ಹಾಗೂ ಇತರರು ಹಾಜರಿದ್ದರು.

error: Content is protected !!