ಮಲೇಬೆನ್ನೂರು : ದೀಪಾವಳಿ ವಿಶೇಷ ಪೂಜೆ

ಮಲೇಬೆನ್ನೂರು : ದೀಪಾವಳಿ ವಿಶೇಷ ಪೂಜೆ

ಮಲೇಬೆನ್ನೂರು, ನ.12- ಇಲ್ಲಿನ ಜಿಗಳಿ ರಸ್ತೆಯಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿಗಳ ಕಛೇರಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವಿಶೇಷ ಪೂಜೆಯನ್ನು ಹೋಮ-ಹವನದ ಮೂಲಕ ನೆರವೇರಿಸಲಾಯಿತು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಜಿ. ಮಂಜುನಾಥ್‌ ಪಟೇಲ್‌, ಜಿಗಳಿ ಪ್ರಕಾಶ್‌ ಮತ್ತು ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಮಕ್ಕಳ ತಜ್ಞ ಡಾ. ಶ್ರೀನಿವಾಸ್‌, ಯೋಜನಾಧಿಕಾರಿ ವಸಂತ್‌ ದೇವಾಡಿಗ ಅವರುಗಳು ದೀಪ ಬೆಳಗಿಸಿ ದೀಪಾವಳಿ ಸಂಭ್ರಮವನ್ನು ಮೇಲ್ವಿಚಾರಕರು ಹಾಗೂ ಸಿಬ್ಬಂದಿಯವರೊಂದಿಗೆ ಆಚರಿಸಿದರು.

ಈ ವೇಳೆ ಕಛೇರಿಯ ಸಹಾಯಕ ಪ್ರಬಂಧಕ ರಾಕೇಶ್‌ ಅವರು ಪ್ರಬಂಧಕರಾಗಿ ಪದೋನ್ನತಿ ಹೊಂದಿ, ಸಂಡೂರಿಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ಉಪತಹಶೀಲ್ದಾರ್‌ ಆರ್‌. ರವಿ, ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್‌, ಪುರಸಭೆ ಮಾಜಿ ಸದಸ್ಯ ಬಿ. ಸುರೇಶ್, ಕೊಕ್ಕನೂರಿನ ಅರ್ಚಕ ಹನುಮಂತರಾಯ, ಹಾಲಿವಾಣದ ಶಿವಕ್ಳ ಆಂಜನೇಯ, ಸಂಪನ್ಮೂಲ ವ್ಯಕ್ತಿಗಳಾದ ಸದಾನಂದ್‌, ಮಲ್ಲಿಕಾರ್ಜುನ್‌ ಕಲಾಲ್, ಪತ್ರಕರ್ತ ರಮೇಶ್‌ ಶ್ರೇಷ್ಠಿ ಸೇರಿದಂತೆ ಇನ್ನೂ ಅನೇಕರು ದೀಪಾವಳಿ ಪೂಜೆಯಲ್ಲಿ ಭಾಗವಹಿಸಿದ್ದರು. 

ಯೋಜನೆಯ ಮೇಲ್ವಿಚಾರಕರಾದ ಸಂಪತ್‌ಲಕ್ಷ್ಮಿ, ರಕ್ಷಿತಾ, ಹರೀಶ್‌, ಮಾರುತಿ, ರಂಗಸ್ವಾಮಿ, ಚಂದ್ರಪ್ಪ, ಸಂತೋಷಿನಿ, ರಂಜಿತಾ, ಕೃಷಿ ಅಧಿಕಾರಿ ಗಂಗಾಧರ್‌, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ, ಗುಂಪು ಲೆಕ್ಕ ಪರಿಶೋಧಕಿ ಆಶಾ, ಕಛೇರಿಯ ಹಣಕಾಸು ಪ್ರಬಂಧಕ ಶ್ರೀಕಾಂತ್‌, ಸಹಾಯಕರಾದ ಪೂಜಾ, ಶಿಲ್ಪಾ, ಅನುಷ, ರೇಷ್ಮಾ, ಮಂಜುನಾಥ್‌ ಸೇರಿದಂತೆ  ಇತರರು  ಹಾಜರಿದ್ದರು. ಅರ್ಚಕ ರಘುನಾಥ್‌ ಪೂಜೆ  ನೆರವೇರಿಸಿದರು.

error: Content is protected !!