ಮಲೇಬೆನ್ನೂರು, ನ. 8 – ಹೊಳೆಸಿರಿಗೆರೆ ಗ್ರಾಮದ ಸುಭಾಷ್ ಚಂದ್ರಭೋಸ್ ನಿರಂತರ ಶಿಕ್ಷಣ ಕೇಂದ್ರ ಹಾಗೂ ಗ್ರಾಮೀಣ ಸಾಹಿತ್ಯ, ಸಾಂಸ್ಕೃತಿಕ ಬಳಗದ ವತಿಯಿಂದ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವದಲ್ಲಿ ಅಗ್ನಿ ಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ತೋರಣಗಟ್ಟಿ ಮಂಜಣ್ಣ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಬಿ.ಶೇಖರಪ್ಪ, ಗ್ರಾ.ಪಂ. ಸದಸ್ಯರಾದ ಬಂಡೇರ ಪ್ರಭು, ನೂರ್ ಅಹಮದ್, ಶ್ರೀಮತಿ ಭಾಗ್ಯಮ್ಮ, ಗ್ರಾಮದ ಪ್ರಗತಿಪರ ಚಿಂತಕ ಕುಂದೂರು ಮಂಜಪ್ಪ, ನಿರಂತರ ಶಿಕ್ಷಣ ಕೇಂದ್ರದ ಎಂ.ಶಿವಕುಮಾರ್, ಶ್ರೀಮತಿ ಅನುಸೂಯಮ್ಮ ಮತ್ತಿತರರು ಈ ವೇಳೆ ಹಾಜರಿದ್ದರು.
July 24, 2024