ರಾಣೇಬೆನ್ನೂರು ಚಂದನ್‌ಗೆ ಡಾ. ಪಾವಟೆ ಪ್ರಶಸ್ತಿ

ರಾಣೇಬೆನ್ನೂರು ಚಂದನ್‌ಗೆ ಡಾ. ಪಾವಟೆ ಪ್ರಶಸ್ತಿ

ರಾಣೇಬೆನ್ನೂರು, ನ. 8- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಅಧಿಕಾರಿ  ಅರುಣಕುಮಾರ ಚಂದನ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ 2021-22ನೇ ಸಾಲಿನ ಡಾ. ಡಿ.ಸಿ. ಪಾವಟೆ ಪ್ರಶಸ್ತಿ ನೀಡಿ ಗೌರವಿಸಿದೆ.

ಧಾರವಾಡದ ಕರ್ನಾಟಕ ವಿವಿ ಗೋಲ್ಡನ್ ಜ್ಯುಬಿಲಿ ಆಡಿಟೋರಿಯಂನಲ್ಲಿ   ಸಮಾರಂಭ ಆಯೋಜಿಸಲಾಗಿತ್ತು. ವಿವಿ ಕುಲಪತಿ  ಪ್ರೊ. ಕೆ.ಬಿ. ಗುಡಸಿ ಪ್ರಶಸ್ತಿ ಪ್ರದಾನ ಮಾಡಿದರು. ಅಲ್ಲದೇ ಚಂದನ್   ನೇತೃತ್ವದ ಎನ್‍ಎಸ್‍ಎಸ್ ಘಟಕಕ್ಕೆ ಅತ್ಯುತ್ತಮ ಎನ್‍ಎಸ್‍ಎಸ್ ಘಟಕ ಪ್ರಶಸ್ತಿಯನ್ನು ಮೌಲ್ಯಮಾಪನ ಕುಲಸಚಿವ ಡಾ. ಸಿ. ಕೃಷ್ಣಮೂರ್ತಿ ಅವರು ಪ್ರಾಂಶುಪಾಲ ಡಾ. ಎಸ್.ಕೆ. ಪಾಟೀಲ ಅವರಿಗೆ ನೀಡಿದರು.

error: Content is protected !!