ಸಾಧು ವೀರಶೈವ ಸಮಾಜದ ಸಭೆ ಶಾಸಕ ಹರೀಶ್ ಸೇರಿ ನಾಲ್ವರಿಗೆ ಸನ್ಮಾನ

ಸಾಧು ವೀರಶೈವ ಸಮಾಜದ ಸಭೆ  ಶಾಸಕ ಹರೀಶ್ ಸೇರಿ ನಾಲ್ವರಿಗೆ ಸನ್ಮಾನ

ಹರಿಹರ, ನ.7- ಇಲ್ಲಿನ ತರಳಬಾಳು ಶಾಲೆಯಲ್ಲಿ ಮಂಗಳವಾರ ಕರೆದಿದ್ದ ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದ ಸಭೆಯಲ್ಲಿ ಶಾಸಕ ಬಿ.ಪಿ.ಹರೀಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹೊಳೆಸಿರಿಗೆರೆ ಹಾಲೇಶಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮತ್ತು ನಿವೃತ್ತ ಯೋಧ ಯಲವಟ್ಟಿಯ ಹೆಚ್.ಶಿವಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ನಂತರ ಬೆಳ್ಳೂಡಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಭಕ್ತಿ ಸಮರ್ಪಣಾ ಕಾರ್ಯಕ್ರಮದ ಲೆಕ್ಕ-ಪತ್ರಗಳನ್ನು ಸಭೆಯಲ್ಲಿ ಸಮಾಜದ ಕಾರ್ಯದರ್ಶಿ ನಿಟ್ಟೂರಿನ ಇಟಗಿ ಶಿವಣ್ಣ ಒಪ್ಪಿಸಿದರು.

ತಾ. ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಅಮರಾವತಿ ಗೌಡ್ರ ಮಹಾದೇವಪ್ಪ ಅವರ ಅಧ್ಯಕ್ಷತೆ ಯಲ್ಲಿ ನಡೆದ ಈ ಸಭೆಯಲ್ಲಿ ಡಿ.ಹೇಮಂತರಾಜ್, ಹೆಚ್.ಎಂ.ಶಿವಾನಂದಪ್ಪ, ಬೆಣ್ಣೆಹಳ್ಳಿ ಹಾಲೇಶಪ್ಪ, ಜಿ.ಮಂಜುನಾಥ್ ಪಟೇಲ್, ಕೆ.ಜಿ.ವೀರನಗೌಡ್ರು, ತಳಸದ ಬಸವರಾಜ್, ದಿಬ್ದಹಳ್ಳಿ ಓಂಕಾರಪ್ಪ, ಹರಳಹಳ್ಳಿ ರವಿ, ಬೆಳ್ಳೂಡಿ ರುದ್ರೇಶ್, ಯಲವಟ್ಟಿ ಚನ್ನಬಸಪ್ಪ, ಕುಂಬ ಳೂರು ತೀರ್ಥಪ್ಪ, ಅಮರಾವತಿ ಪಾಲಾಕ್ಷಪ್ಪ, ಬೆಳ್ಳೂಡಿ ಹನುಮಂತಗೌಡ, ಕೊಂಡಜ್ಜಿಯ ಪಟೇಲ್ ಸಂಗಪ್ಪ, ಕೆ.ಎನ್.ಹಳ್ಳಿಯ ಹುಗ್ಗಿ ರೇವಣಪ್ಪ, ಕುಣೆಬೆಳಕೆರೆ ಮರಳಪ್ಪ, ಮಲ್ಲನಾಯ್ಕನಹಳ್ಳಿ ಗೌಡ್ರ ಶೇಖರಪ್ಪ, ಚಿಟ್ಟಕ್ಕಿ ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.

error: Content is protected !!