ಬಿ.ಎಸ್ ಚನ್ನಬಸಪ್ಪ ಅಂಡ್ ಸನ್ಸ್‌ನಲ್ಲಿ ರಾಜ್ಯೋತ್ಸವ

ಬಿ.ಎಸ್ ಚನ್ನಬಸಪ್ಪ ಅಂಡ್ ಸನ್ಸ್‌ನಲ್ಲಿ ರಾಜ್ಯೋತ್ಸವ

ದಾವಣಗೆರೆ, ನ.7-  ನಗರದ ಹೆಸರಾಂತ ಬಿ.ಎಸ್ ಚನ್ನಬಸಪ್ಪ ಅಂಡ್ ಸನ್ಸ್ ಇವರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅಂಗಡಿಯ ಮುಂಭಾಗದಲ್ಲಿ ಆಚರಿಸಲಾಯಿತು.

ಅಂಗಡಿಯ ಮಾಲೀಕರಾದ ಬಿ.ಸಿ ವಿವೇಕ್ ಮತ್ತು ಬಿ.ಎಸ್. ಮೃನಾಲ್ ಧ್ವಜಾರೋಹಣ ನಡೆಸಿ, ಸಿಹಿ ಹಂಚಿ  ಆಟೋ ಚಾಲಕರ, ಚಲನಚಿತ್ರ ನಟರ ಭಾವಚಿತ್ರಗಳನ್ನು ನೀಡಿದರು.

ಕನ್ನಡ ರಾಜ್ಯೋತ್ಸವ ಬರೀ ತಿಂಗಳಿಗೆ ಮಾತ್ರ ಸೀಮಿತವಾಗಬಾರದು,  ಪ್ರತಿದಿನ ನಾವು ಕನ್ನಡವನ್ನು ಬಳಸಿ, ಕನ್ನಡವನ್ನು ಬೆಳೆಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಅಂಗಡಿಯ ಒಳಭಾಗದಲ್ಲಿ ವಿಶೇಷವಾಗಿ ನಮ್ಮ ಕನ್ನಡ ಧ್ವಜದ ಬಣ್ಣಗಳ ಅಲಂಕಾರವನ್ನು ಏರ್ಪಡಿಸಲಾಗಿತ್ತು. ಪ್ರತಿಯೊಬ್ಬ ಪ್ರಜೆಯೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕು,  ಆಗ ಮಾತ್ರ ನಮ್ಮ ದೇಶ, ಭಾಷೆ, ನೆಲ, ಜಲ ಎಲ್ಲವೂ ಸಮಾನವಾಗಿ  ಬೆಳೆಯಲು ಸಾಧ್ಯ ಎಂದು ತಿಳಿಸಿದರು. ಅಂಗಡಿಯ ಮೇನೇಜರ್  ಉಮೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!