ಸೇಂಟ್ ಜಾನ್ಸ್‌ನಲ್ಲಿ ರಾಜ್ಯೋತ್ಸವ

ಸೇಂಟ್ ಜಾನ್ಸ್‌ನಲ್ಲಿ  ರಾಜ್ಯೋತ್ಸವ

ದಾವಣಗೆರೆ, ನ. 2- ಕರ್ನಾಟಕ ಎಂದು ಮರುನಾಮಕರಣವಾಗಿ ಇಂದಿಗೆ 50 ವರ್ಷಗಳು ತುಂಬಿದ ಸವಿನೆನಪಿನಲ್ಲಿ ನಗರದ ಸೇಂಟ್‌ಜಾನ್ಸ್ ವಿದ್ಯಾಸಂಸ್ಥೆಯಲ್ಲಿ 68ನೇ ವರ್ಷದ ರಾಜ್ಯೋತ್ಸವವನ್ನು ಶಾಲಾ ಆವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ದಾವಣಗೆರೆ ವಿವಿ ಸಹ ಪ್ರಾಧ್ಯಾಪಕ ಡಾ. ಕೆ. ಮಲ್ಲಿಕಾರ್ಜುನ ವಿಶೇಷ ಅತಿಥಿಗಳಾಗಿ ಆಗಮಿಸಿ, ಕನ್ನಡದ ಪ್ರಾಚೀನ ಮಹಾಕಾವ್ಯಗಳು, ಶಾಸನಗಳು, ನದಿಗಳು, ಪಾಕೃತಿಕ ಸನ್ನಿವೇಶಗಳನ್ನು, ಕನ್ನಡಿಗರ ಗುಣ ಸ್ವಭಾವ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್. ಅನಿಲ್‌ಕುಮಾರ್, ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ, ಖಜಾಂಚಿ ಪ್ರವೀಣ್‌ ಹುಲ್ಲುಮನೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಆರ್. ಸೈಯದ್ ಆರೀಫ್, ಶ್ರೀಮತಿ ಪ್ರೀತಾ ಟಿ. ರೈ, ಉಪ ಪ್ರಾಂಶುಪಾಲ ಶ್ರೀಮತಿ ಎಸ್.ಎಂ. ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!