ಸರ್ವ ಜನಾಂಗ ಏಕತಾ ರಕ್ಷಣಾ ಸಮಿತಿಯಿಂದ ರಾಜ್ಯೋತ್ಸವ

ಸರ್ವ ಜನಾಂಗ ಏಕತಾ ರಕ್ಷಣಾ ಸಮಿತಿಯಿಂದ ರಾಜ್ಯೋತ್ಸವ

ದಾವಣಗೆರೆ, ನ. 1 – ಕರ್ನಾಟಕ ರಾಜ್ಯ ಸರ್ವ ಜನಾಂಗ ಏಕತ ರಕ್ಷಣಾ ಸಮಿತಿ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವವನ್ನು ಎಂ.ಸಿ.ಸಿ. `ಎ’ ಬ್ಲಾಕ್‌ನಲ್ಲಿ ಆಚರಿಸಲಾಯಿತು. ರಾಜ್ಯಾಧ್ಯಕ್ಷ ಕಣ್ಣಾಳ ಅಂಜಿನಪ್ಪ ಕನ್ನಡ ಧ್ವಜಾರೋಹಣ ಮಾಡಿದರು. ಗೌರವ ಅಧ್ಯಕ್ಷ ಮಾರುತಿ ಮಂಜುನಾಥ್, ವಿದ್ಯಾ, ಸಮೀರ್‌, ಯೂಸುಫ್, ಹನುಮಂತ, ಗಿರೀಶ್, ಮಹಿಳಾ ಘಟಕದ ಮಂಜುಳಾ, ಎಸ್. ನಾಗರಾಜ್ ಕುಮಾರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!