ದಾವಣಗೆರೆ, ಅ. 30- ಈಚೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿತ್ರದುರ್ಗದಲ್ಲಿ ನಡೆದ 2023-24 ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾಲಯ ಅಂತರ್ ಕಾಲೇಜು ಕಬಡ್ಡಿ ಪಂದ್ಯಾವಳಿಯಲ್ಲಿ ದಾವಣಗೆರೆಯ ಎ.ಆರ್.ಎಂ. ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನ ಪಡೆದಿದೆ.
ವಿಜೇತರಿಗೆ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಎಲ್. ಭರತ್, ಆಡಳಿತಾಧಿಕಾರಿ ಸೋಮಶೇಖರ ಬಿ. ಕಿಚಡಿ, ಪ್ರಾಂಶುಪಾಲ ಎಂ.ಡಿ. ಅಣ್ಣಯ್ಯ, ಐಕ್ಯುಎಸಿ ಸಂಚಾಲಕ ಡಿ. ಅಂಜಿನಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ್ ವಿ.ದಮ್ಮಳ್ಳಿ, ಬೋಧಕ ವರ್ಗದವರಾದ ಕಾಡಜ್ಜಿ ಶಿವಪ್ಪ, ಎಸ್.ಬಿ. ಮನೋಹರ್, ಮಹ್ಮದ್ ರಿಯಾಜ್, ಹೆಚ್. ಶಾಂತನಾಯ್ಕ, ಟಿ.ಎನ್. ಮೌನೇಶ್ವರ, ಜಿ.ಎಸ್. ಮಧುಮಾಲತಿ, ಬಿ.ಸಿ. ರಾಕೇಶ್ ಅಭಿನಂದಿಸಿ, ಶುಭಾಶಯ ತಿಳಿಸಿದ್ದಾರೆ.