ದಾವಣಗೆರೆ, ಅ. 23 – ವಿಜಯ ದಶಮಿಯ ಪ್ರಯುಕ್ತ ನಗರದ ಎಸ್. ನಿಜಲಿಂಗಪ್ಪ ಬಡಾವಣೆ ಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಶ್ರೀ ಶಾರದಾ ದೇವಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ನಗರದ ರಾಜ ಬೀದಿಗಳಲ್ಲಿ ಸಂಚರಿಸಿ ಪಲಕ್ಕಿ ಮೆರವಣಿಗೆ ಮಾಡಲಾಯಿತು.
ವೇದಬ್ರಹ್ಮ ಶ್ರೀ ಶಂಕರ ನಾರಾಯಣ ಶಾಸ್ತ್ರಿಗಳು ಮತ್ತು ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ. ಟಿ.ಅಚ್ಯುತ್ ಅವರು ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯ ದರ್ಶಿ ಶ್ರೀನಿವಾಸ್ ಜೋಶಿ, ಉಪಾ ಧ್ಯಕ್ಷ ಮೋತಿ ಸುಬ್ರಹ್ಮಣ್ಯ, ವಿನಾಯಕ ಜೋಶಿ, ಅನಿಲ್ ಬಾರೆಂಗಳ್, ರಾಘವೇಂದ್ರ, ರಮೇಶ್, ದಿವಾಕರ್, ರಮೇಶ್ ಪಾಟೀಲ್, ಅನಿರುದ್ಧ, ಮಂಜುನಾಥ್, ಹಾಗು ಮಹಿಳಾ ಸಂಘದ ಶ್ರೀಮತಿ ನಳಿನಿ ಅಚ್ಯುತ್ ಮತ್ತು ಅವರ ಸಂಗಡಿಗರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.