ಜಿಗಳಿಯ ಮಿತ್ರ ತಂಡಕ್ಕೆ ದ್ವಿತೀಯ ಬಹುಮಾನ
ಮಲೇಬೆನ್ನೂರು, ಅ.22- ಪಟ್ಟಣದ ಪಿಡಬ್ಲ್ಯೂಡಿ ಕ್ರಿಕೆಟರ್ ತಂಡವು ಹರಿಹರದಲ್ಲಿ ಸೈ ಕ್ರಿಕೆಟ್ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಮೆಂಟ್ನಲ್ಲಿ ಪ್ರಥಮ ಬಹುಮಾನ ಪಡೆದಿದೆ.
ಭಾನುವಾರ ಸಂಜೆ ಜರುಗಿದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ.ಹರೀಶ್ ಅವರು, ಮಲೇಬೆನ್ನೂರಿನ ಪಿಡಬ್ಲ್ಯೂಡಿ ಕ್ರಿಕೆಟರ್ ತಂಡಕ್ಕೆ 40 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಿ, ಅಭಿನಂದಿಸಿದರು.
ದ್ವಿತೀಯ ಬಹುಮಾನಕ್ಕೆ ಆಯ್ಕೆಯಾದ ಜಿಗಳಿಯ ಮಿತ್ರ ತಂಡಕ್ಕೆ 20 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿಯನ್ನು ಶಾಸಕ ಹರೀಶ್ ವಿತರಿಸಿದರು.
ಪಂದ್ಯ ಪುರುಷೋತ್ತಮರಾಗಿ ಪಿಡಬ್ಯೂಡಿ ಕ್ರಿಕೆಟರ್ನ ದೊರೆ ಸ್ವಾಮಿ, ಬೆಸ್ಟ್ ಬೋಲರ್ ಆಗಿ ಮಹಾಂತೇಶ್, ಬೆಸ್ಟ್ ಬ್ಯಾಟ್ಸ್ಮನ್ ಆಗಿ ವೆಂಕಟೇಶ್ ಮತ್ತು ಅಲ್ರೌಂಡರ್ ಆಗಿ ಜಿಗಳಿಯ ಮಿತ್ರ ತಂಡದ ಕೀರ್ತಿ ಆಯ್ಕೆಯಾಗಿ ಬಹುಮಾನ ಪಡೆದರು.
ಪಿಡಬ್ಲ್ಯೂಡಿ ಕ್ರಿಕೆಟರ್ ತಂಡದಲ್ಲಿ ನಟರಾಜ್, ಅಶೋಕ್, ಹರೀಶ್, ಹನುಮೇಶ್, ಕುಮಾರ್, ತಿಪ್ಪೇಶ್, ಪುನೀತ್, ಚಂದ್ರು, ಸಿದ್ದು, ಧನಿಕ ಸ್ವಾಮಿ, ಅಪ್ಪು, ಅಭಿ, ಸಲೀಂ, ಸಂಜು, ಯುವರಾಜ್, ರುದ್ರೇಶ್, ಅಣ್ಣಪ್ಪ, ಚೇತನ್ ಮತ್ತು ಕೊಮಾರನಹಳ್ಳಿ ಸುನೀಲ್ ಇದ್ದರು.