ಜಗಳೂರು : ಅರ್ಹರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು

ಜಗಳೂರು : ಅರ್ಹರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು

ಶಾಸಕ‌ ದೇವೇಂದ್ರಪ್ಪ ಆಶಯ

ಜಗಳೂರು, ಅ. 20 – ಅರ್ಹರಿಗೆ ಸರಕಾರದ ಸೌಲಭ್ಯಗಳು  ತಲುಪಬೇಕು ಎಂದು ಶಾಸಕ‌ ಬಿ. ದೇವೇಂದ್ರಪ್ಪ ಅಧಿಕಾರಿಗಳಿಗೆ  ಸೂಚಿಸಿದರು. 

ಪಟ್ಟಣದ ಜನಸಂಪರ್ಕ ಕೇಂದ್ರ‌ದ ಮುಂಭಾಗ ವಾಲ್ಮೀಕಿ ಅಭಿವೃದ್ದಿ ನಿಗಮದಿಂದ 24‌ ಫಲಾನುಭವಿಗಳಿಗೆ ದ್ವಿ-ಚಕ್ರ ವಾಹನ ವಿತರಿಸಿ ನಂತರ ಅವರು ಮಾತನಾಡಿದರು.

ದ್ವಿಚಕ್ರ ವಾಹನಗಳನ್ನು ಸದುಪಯೋಗಪಡೆದುಕೊ ಳ್ಳಬೇಕು. ಲೈಸೆನ್ಸ್ ಇಲ್ಲದೆ ವಾಹನ‌ ಚಾಲನೆ ಮಾಡ ಬೇಡಿ. ಅಪ್ರಾಪ್ತರ ಕೈಯಲ್ಲಿ ಚಲಿಸಲು  ಕೊಡಬೇಡಿ ಎಂದರು. ಮುಂಗಾರು ಮಳೆ ಕೊರತೆಯಿಂದ ಹಿಂಗಾರು ಕೈಕೊಟ್ಟಿದೆ. ತಾಲ್ಲೂಕಿನಲ್ಲಿ ಬರ ತಾಂಡವ ವಾಡುತ್ತಿದೆ. ಸರಳ  ಜೀವನ ಸಾಗಿಸೋಣ ಸರ್ಕಾರದ ಯೋಜನೆಗಳು  ಕುಟುಂಬ ನಿರ್ವಹಣೆಗೆ ಪೂರಕವಾ ಗಲಿವೆ. ಅಧಿಕಾರಿಗಳು ಮಾಡುವ ಕೆಲಸ ವಿಳಂಬ ವಾದರೆ,  ಅದು ಭ್ರಷ್ಟಾಚಾರದ ಇನ್ನೊಂದು ಮುಖ. ಕರ್ತವ್ಯ ಪಾಲಿಸಬೇಕು. ಕೆಲವರು ವಿನಾಕಾರಣ ಸುಳ್ಳು ಸೃಷ್ಠಿಸಿ ಅಪಪ್ರಚಾರ ಮಾಡುವವರಿದ್ದಾರೆ. ನಾನು ಸೌಮ್ಯ ಸ್ವಭಾವದವನು. ಅಧಿಕಾರಿಗಳಿಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡುವ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೂ ಇದೆ. ನನ್ನ ಬಗ್ಗೆ ಅಪಪ್ರಚಾರ ಮಾಡಬೇಡಿ ನಮಗೆ ಸಲಹೆ ಸೂಚನೆ ನೀಡಬೇಕು ಎಂದರು.

   ತಹಶೀಲ್ದಾರ್ ಸಯ್ಯದ್ ಖಲೀಮ್ ಉಲ್ಲಾ ಮಾತನಾಡಿ, ಶಾಸಕರ ನಿರ್ದೇಶನದಂತೆ ಸರ್ಕಾರದ ಆದೇಶಗಳನ್ನು ಅಧಿಕಾರಿಗಳು ಪಾಲಿಸಬೇಕು.ನಿಗದಿತ ಅವಧಿಯಲ್ಲಿ ಸೌಲಭ್ಯಗಳನ್ನು ಸಮರ್ಪಕ ವಾಗಿ  ಒದಗಿಸಲು ಮುಂದಾಗಬೇಕು ಎಂದರು.

ವಾಲ್ಮೀಕಿ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಮಹಾ ವೀರ ಸಜ್ಜನ್ ಮಾತನಾಡಿ, ನಿಗಮದಿಂದ ಮಹಿಳಾ‌ ಉದ್ಯಮಶೀಲತೆಗೆ 2 ಲಕ್ಷ ಸಾಲ ಸೌಲಭ್ಯ ಸಾರಥಿ ಯೋಜನೆ, ಎಂಸಿಎಫ್ 2.5 ಲಕ್ಷ  ಗಂಗಾಕಲ್ಯಾಣ ಯೋಜನೆಯಡಿ. 3.5 ಲಕ್ಷ ವೆಚ್ಚ ಭರಿಸಲಿದೆ. ಭೂ ಒಡೆತನ‌ ಯೋಜನೆಯಡಿ 20 ಲಕ್ಷ ವೆಚ್ಚದಲ್ಲಿ 1ಎಕರೆ 10 ಲಕ್ಷ ಸಬ್ಸಿಡಿ ಇದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಬಿ. ಮಹೇಶ್ವರಪ್ಪ, ಪಿಎಸ್ ಐ ಸಾಗರ್, ಅಹ್ಮದ್ ಅಲಿ, ಟಿಡಿಓ ನಾಗೇಂದ್ರಪ್ಪ,ಸೇರಿದಂತೆ ಇತರರು ಇದ್ದರು.

error: Content is protected !!