ಸರ್ಕಾರಿ ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ವಹಿಸದೇ ಸೇವೆ ಮಾಡಬೇಕು

ಸರ್ಕಾರಿ ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯ ವಹಿಸದೇ ಸೇವೆ ಮಾಡಬೇಕು

ಜಗಳೂರಿನ ಕಾರ್ಯಕ್ರಮದಲ್ಲಿ ಶಾಸಕ ದೇವೇಂದ್ರಪ್ಪ ಕಿವಿಮಾತು

ಜಗಳೂರು, ಅ.18- ರೋಗಿಗಳ‌ ಪಾಲಿಗೆ ವೈದ್ಯರು ಸಾಕ್ಷಾತ್ ದೇವರುಗಳಿದ್ದಂತೆ. ಸರ್ಕಾರಿ ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯವಹಿಸದೇ ಸೇವೆ ಮಾಡಿ  ಎಂದು ಶಾಸಕ ಬಿ.ದೇವೇಂದ್ರಪ್ಪ ಕಿವಿಮಾತು ಹೇಳಿದರು.

ಪಟ್ಟಣದ ಸಾರ್ವಜನಿಕ‌ ಆಸ್ಪತ್ರೆಯ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ  ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುವೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸದೇ  ಕರ್ತವ್ಯ ದ್ರೋಹವೆಸಗಬೇಡಿ.ತಮಗೆ ಸದಾ ಸಹಕಾರವಿದೆ. ಆಸ್ಪತ್ರೆಯಲ್ಲಿನ ಕುಂದು ಕೊರತೆಗಳನ್ನು ಮುಕ್ತವಾಗಿ ನನ್ನ ಬಳಿ ಚರ್ಚಿಸಬೇಕು. ಅಗತ್ಯ ಸೌಲಭ್ಯಗಳನ್ನು ಸರಕಾರದಿಂದ ಒದಗಿಸಲಾಗುವುದು ಎಂದರು.

ವೈದ್ಯ‌ ವೃತ್ತಿ ವಿಶಿಷ್ಟವಾದದ್ದು. ಸಾವಿನಂಚಿನಲ್ಲಿರುವ ರೋಗಿಯನ್ನು ಬದುಕಿಸುವ, ಆತ್ಮಸ್ಥೈರ್ಯ ತುಂಬುವ  ಕಲೆ ನಿಮ್ಮಲ್ಲಿದೆ. ಕೆಲ‌ ವರ್ಷಗಳ ಹಿಂದೆ ನನ್ನ ಇಬ್ಬರು ಪುತ್ರರು ಆರೋಗ್ಯ ಸೇವೆಯಲ್ಲಿ ತೊಡಗಿದ್ದು ತೃಪ್ತಿ ತಂದಿದೆ. ವೃತ್ತಿ ಗೌರವದ ಬಗ್ಗೆ ಕೀಳರಿಮೆ‌‌ ಸಲ್ಲದು. ತಮ್ಮ ಸೇವೆಗೆ ಪ್ರತಿಫಲ ಸಿಗುತ್ತದೆ ಎಂದರು.

ಚಿಕ್ಕಮ್ಮನಹಟ್ಟಿ ವೃದ್ಧನ ಸಾವಿಗೆ ಸ್ಪಷ್ಟನೆ: ಇತ್ತೀಚೆಗೆ  ಚಿಕ್ಕಮ್ಮನಹಟ್ಟಿ ಗ್ರಾಮದ ವೃದ್ಧನ ಸಾವಿನ ಬಗ್ಗೆ ವೈದ್ಯರ ನಿರ್ಲಕ್ಷ್ಯ ಎಂದು ನಡೆಸಿದ ಪ್ರತಿಭಟನೆ ಕುರಿತು ಡಾ.ಸವಿತಾ ಅವರು ಪ್ರತಿಕ್ರಿಯಿಸಿ, ನಾನು ಒಪಿಡಿ ಕರ್ತವ್ಯದಲ್ಲಿದ್ದೆ, ಹೊರರೋಗಿಯಾಗಿ ಆಗಮಿಸಿದ್ದರು. ಆಗ ನಾನು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ರೆಫರ್ ಮಾಡಿದ್ದೆವು. ಆದರೆ ಹಠದಿಂದ ಇಲ್ಲೇ ಉಳಿದು ಕೊಂಡರು, ದಾಖಲಾಗಿರಲಿಲ್ಲ. ಸಮಯ ಸಕಾಲದಲ್ಲಿ ಹೋಗದೆ ವಿಳಂಬ ಮಾಡಿದ್ದರಿಂದ ಸಾವನ್ನಪ್ಪಿದರು. ಇದರಲ್ಲಿ ನಮ್ಮ‌ ತಪ್ಪೇನೂ ಇಲ್ಲ. ನನ್ನ ಮೇಲೆ ವಿನಾಕಾರಣ ಆರೋಪ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಆಡಳಿತ ವೈದ್ಯಾಧಿಕಾರಿ ಡಾ. ಷಣ್ಮುಖಪ್ಪ ಮಾತನಾಡಿ, ವೈದ್ಯರ ಕೊರತೆಯಿದ್ದು, ಇರುವವರನ್ನೇ ರಾತ್ರಿ, ಹಗಲು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಡಯಾಗ್ನೋಸ್ಟಿಕ್, ರೇಡಿಯಸ್, ಲ್ಯಾಬೋರೇಟರಿ ಯಂತ್ರೋಪಕರಣಗಳಿದ್ದು, ಟೆಕ್ನೀಷಿಯನ್ ಕೊರತೆಯಿದೆ ಎಂದು ಮಾಹಿತಿ‌ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಲೇರಿಯಾ ವೈದ್ಯಾಧಿಕಾರಿ ಡಾ.ನಟರಾಜ್, ಟಿಎಚ್‌ಓ ಡಾ.ವಿಶ್ವನಾಥ್, ಡಾ.ಸಂಜಯ್, ಡಾ.ಸವಿತಾ, ಡಾ.ಅಶ್ವಿನಿ, ಡಾ.ಜಗನ್ನಾಥ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಗೌಸ್‌ಪೀರ್ ಸೇರಿದಂತೆ ಸಿಬ್ಬಂದಿಗಳು  ಇದ್ದರು.

error: Content is protected !!