ಪುಟ್ಟರಾಜ ಸೇವಾ ಸಮಿತಿಯಿಂದ ಪಂ. ಪುಟ್ಟರಾಜ ಗವಾಯಿ ಸ್ಮರಣೋತ್ಸವ

ಪುಟ್ಟರಾಜ ಸೇವಾ ಸಮಿತಿಯಿಂದ ಪಂ. ಪುಟ್ಟರಾಜ ಗವಾಯಿ ಸ್ಮರಣೋತ್ಸವ

ದಾವಣಗೆರೆ, ಅ. 17 – ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳವರ ಸ್ಮರಣೋತ್ಸವ ಕಾರ್ಯಕ್ರಮವನ್ನು ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಮಹಿಳಾ ಘಟಕ ದಾವಣಗೆರೆ ಮತ್ತು ಜಿಲ್ಲಾ ಘಟಕದವರಿಂದ ಆಚರಿಸಲಾಯಿತು. 

ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳವರ ಸ್ಮರಣೆ ಮಾಡುತ್ತಾ ಗವಾಯಿ ಗಳವರ ವಚನಗಳನ್ನು ಶ್ರೀಮತಿ ಮಂಗಳಗೌರಿ ಅವರು ಸದಸ್ಯರೆಲ್ಲರಿಗೂ ಹೇಳಿಕೊಟ್ಟರು ಮತ್ತು ಅವರ ಜೀವನ ಚರಿತ್ರೆಯ ಬಗ್ಗೆ  ರೇವಣಸಿದ್ದಪ್ಪ ಜಿಲ್ಲಾ ಘಟಕದ ಉಪಾಧ್ಯಕ್ಷರು ತಿಳಿಸಿಕೊಟ್ಟರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಸೌಮ್ಯ ಸತೀಶ್, ಸಹ ಕಾರ್ಯದರ್ಶಿ ಮಧುಮತಿ ಗಿರೀಶ್, ಕೋಶಾಧ್ಯಕ್ಷೆ ಶಾನ್ವಿ ರಾಜಶ್ರೀ ರಮೇಶ್, ಸಂಚಾಲಕರಾದ ಶಾಂತ ಶಿವಶಂಕರ್ ಮತ್ತು ಶಶಿಕಲಾ, ಸದಸ್ಯರಾದ ಶ್ರೀಮತಿ ಪೂರ್ಣಿಮಾ ಎಲ್. ಬಸವರಾಜ್, ಸುಮಾ, ಸೀಮಾ, ಸುಮಾ ಕಾರ್ಯಕ್ರಮದಲ್ಲಿದ್ದರು.

error: Content is protected !!