ರಾಜಕೀಯಕ್ಕೆ ಹೊಸ ಮುಖಗಳ ಅವಶ್ಯಕತೆ ಇದೆ

ರಾಜಕೀಯಕ್ಕೆ ಹೊಸ ಮುಖಗಳ ಅವಶ್ಯಕತೆ ಇದೆ

ಜಿ.ಬಿ. ವಿನಯ್‌ಕುಮಾರ್

ದಾವಣಗೆರೆ,ಅ.17- ರಾಜಕೀಯ ಕ್ಷೇತ್ರಕ್ಕೆ  ಹೊಸ ಮುಖಗಳ ಅವಶ್ಯಕತೆ ಹಾಗೂ ಜನಸಾಮಾನ್ಯರ ಅಭಿವೃದ್ಧಿಗೆ ಸ್ಪಂದಿಸುವವರು ಬೇಕಾಗಿದ್ದಾರೆ ಎಂದು ಇನ್‌ಸೈಟ್ ಐಎಎಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ  ಜಿ.ಬಿ ವಿನಯ್ ಕುಮಾರ್ ಹೇಳಿದರು.

ತಾಲ್ಲೂಕಿನ ಕುಣಿಬೆಳಕೆರೆ ಗ್ರಾಮದಲ್ಲಿ ಶ್ರೀ ಬೀರಲೀಂಗೇಶ್ವರ ದೇವಸ್ಥಾನದ ಕಳಸಾರೋಹಣದ ಧಾರ್ಮಿಕ  ಸಮಾರಂಭದಲ್ಲಿ  ಭಾಗವಹಿಸಿ ಅವರು ಮಾತನಾಡಿದರು. 

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ‌‌ ಮುಂದಾಗಬೇಕಾಗಿದೆ. ಮನೆಯಲ್ಲಿ ಒಬ್ಬ‌ ಅಧಿಕಾರಿ ಇದ್ದರೆ ಕುಟುಂಬದ ನಿರ್ವಹಣೆ ಸುಗಮವಾಗಿ ಸಾಗಲಿದೆ. ಅದೇ ರೀತಿಯಾಗಿ  ಮನೆಗೊಬ್ಬ ಅಧಿಕಾರಿಗಳನ್ನು ನೀಡಬೇಕೆಂಬ ಮಹದಾಸೆಯಿಂದ ನಾನು ಇನ್‌ಸೈಟ್ ಐಎಎಸ್ ಶಿಕ್ಷಣ ಸಂಸ್ಥೆ  ಪ್ರಾರಂಭಿಸಿದ್ದೇನೆ. ನಮ್ಮ ಸಂಸ್ಥೆಯಲ್ಲಿ   ಸಾವಿರಾರು  ಐಎಎಸ್ ಮತ್ತು ಐಪಿಎಸ್  ಶಿಕ್ಷಣ ಪಡೆದು ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ.  ಅದೇ ರೀತಿ  ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ಜನಸಾಮಾನ್ಯರ ಕೈಗೆ ಸಿಗುವಂತ ಜನಪ್ರತಿನಿಧಿಗಳ ಅವಶ್ಯಕತೆ ಇದೆ. ಹಾಗೆ ರಾಜಕೀಯ ಇಚ್ಛಾಶಕ್ತಿ ಇರುವಂತವರ ಅವಶ್ಯಕತೆ ಇದೆ. ಮತ್ತೆ ನಿಮ್ಮ ಸಮಸ್ಯೆಗಳಿಗೆ ಮತ್ತು ಅಭಿವೃದ್ಧಿ  ಮಾಡುವಂತಹ ಪ್ರಜ್ಞಾವಂತ ರಾಜಕೀಯ ಪ್ರತಿನಿಧಿಬೇಕಾಗಿದೆ. 

ಮುಂದೆ ನಾನೂ ಕೂಡ ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದು, ನಿಮ್ಮ ಪ್ರೀತಿ, ವಿಶ್ವಾಸ ಬೇಕಾಗಿದೆ ಎಂದರು.

error: Content is protected !!