ಐಎಂಎ ಹಾಲ್‌ನಲ್ಲಿ ಸಾಂಪ್ರದಾಯಕ ಅಡುಗೆಯ ಪ್ರಾತ್ಯಾಕ್ಷಿಕೆ

ಐಎಂಎ ಹಾಲ್‌ನಲ್ಲಿ ಸಾಂಪ್ರದಾಯಕ ಅಡುಗೆಯ ಪ್ರಾತ್ಯಾಕ್ಷಿಕೆ

ದಾವಣಗೆರೆ, ಅ. 15- ನಗರದ ಐಎಂಎ ಹಾಲ್ ನಲ್ಲಿ ಸಾಂಪ್ರದಾಯಕ ಅಡುಗೆಯ ಪ್ರಾತ್ಯಾಕ್ಷಿಕೆ ಕಾರ್ಯಕ್ರಮವನ್ನು ಈಚೆಗೆ ನಡೆಸಲಾಯಿತು.
ವಿನೋದ ಅಜಗಣ್ಣನವರ್ ಮುಖ್ಯ ಅತಿಥಿಗಿ ಉಪ್ಥಸ್ಥಿತರಿದ್ದು ಮಾತನಾಡಿ, ಆಧುನಿಕ ಫಾಸ್ಟ್ ಫುಡ್ ಗಳಿಗೆ ಮಾರು ಹೋಗದೆ ಮನೆಯಲ್ಲಿ ಅಡುಗೆ ಹೇಗೆ ಮಾಡಿ ಆರೋಗ್ಯ ಕಾಪಾಡಿಕೊಳ್ಳ ಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜಾತ ರವೀಂದ್ರ ಮಾತನಾಡಿ, ಗಾಂಧಿ ಜಯಂತಿ ಯನ್ನು ಅಂತರರಾಷ್ಟ್ರೀಯ ಅಹಿಂಸಾ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದರೂ,
ಪ್ರಸ್ತುತ ನಡೆಯುತ್ತಿರುವ ಯುದ್ಧದಲ್ಲಿ ಕಾಣುತ್ತಿರುವ ಕ್ರೂರತೆ, ಹಿಂಸೆ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಉಷಾ ರೇಣುಕಾನಂದ, ಮಮತಾ ಬಸವರಾಜ್, ರೇಖಾ ಪ್ರಶಾಂತ್ ಮತ್ತು ಸಿಂಚನ ವೀರೇಶ್ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!