ಜಗಳೂರು : ಪಲ್ಲಾಗಟ್ಟೆಯಲ್ಲಿ ಗುರುವಂದನೆ – ಸ್ನೇಹ ಸಮ್ಮಿಲನ

ಜಗಳೂರು : ಪಲ್ಲಾಗಟ್ಟೆಯಲ್ಲಿ ಗುರುವಂದನೆ –  ಸ್ನೇಹ ಸಮ್ಮಿಲನ

ಜಗಳೂರು, ಅ. 15- ಜಗಳೂರು ತಾಲ್ಲೂಕು ಪಲ್ಲಾಗಟ್ಟೆ ಗ್ರಾಮದಲ್ಲಿ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀಮತಿ ಸಿದ್ದಮ್ಮ ಗ್ರಾಮೀಣ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಅಗಲಿದ ಗುರುವರ್ಗ ಹಾಗೂ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮಹಾದೇವಪ್ಪ ದಿದ್ದಿಗಿ ಅವರು ತಮ್ಮ ತಂದೆ-ತಾಯಿ ಹೆಸರಿನಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ 5001/- ರೂ. ನೀಡುವುದಾಗಿ ಗುರುಗಳ ಸಮ್ಮುಖದಲ್ಲಿ ತಿಳಿಸಿದರು. 

ಶಾಲೆಯ ಮುಖ್ಯೋಪಾಧ್ಯಾಯ ಮಾರುತೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಮಹಾದೇವಪ್ಪ ದಿದ್ದಿಗಿ, ಸ್ನೇಹಿತರು ಗುರುಗಳನ್ನು ಸನ್ಮಾನಿಸಿ, ಗೌರವಿಸಿದರು. ರೀಟಾ ಪ್ರಾರ್ಥಿಸಿದರು. ಗೋಣಿ ಬಸವರಾಜು ಸ್ವಾಗತಿಸಿದರು. ತಿಮ್ಮಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿವಗಂಗಮ್ಮ ನಿರೂಪಿಸಿದರು. ಆರ್.ಹೆಚ್. ಮಹೇಶ್ವರಪ್ಪ ವಂದಿಸಿದರು.

error: Content is protected !!