ಹರಿಹರ, ಅ. 12- ಹರಿಹರ ತಾಲ್ಲೂಕು ಗಂಗನರಸಿಯ ಶ್ರೀ ಗೋಣಿ ಬಸವೇಶ್ವರ ಸ್ವಾಮಿ ಹೊರಮಠ, ಶ್ರೀ ಹನುಮಂತ ದೇವರ ಜೀರ್ಣೋದ್ಧಾರ ಸಮಿತಿಯಿಂದ ನಾಡಿದ್ದು ದಿನಾಂಕ 14ರ ಶನಿವಾರ ಮಹಾನವಮಿ ಅಮಾವಾಸ್ಯೆ ವಿಶೇಷ ಪೂಜೆ ನಡೆಯಲಿದೆ. ಅಂದು ಬೆಳಿಗ್ಗೆ 11 ಕ್ಕೆ ಶ್ರೀ ಗೋಣಿ ಬಸವೇಶ್ವರ, ನಾಗದೇವತಾ ಸ್ವಾಮಿಗಳಿಗೆ ವಿಶೇಷ ಪೂಜೆ, ಅಭಿಷೇಕ ನಡೆಯುವುದು. ನಂತರ 11.30 ಕ್ಕೆ ಮಹಾ ಪ್ರಸಾದ ಸೇವೆಯನ್ನು ಶ್ರೀಮತಿ ಬಸಜ್ಜರ ಗೌರಮ್ಮ ರಾಜ್ಯ ಇಮ್ಮಡಿ ಚಿಕ್ಕ ಭೂಪಾಲ್ ಕಿರಣ್ ದೊಡ್ಡಡ್ಡೇರ, ಜಿಗಳಿ, ಇವರು ಏರ್ಪಡಿಸಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.
July 25, 2024